ಮಂಗಳೂರು, ಜೂ. 03 (Daijiworld News/MB) : ಮಾಜಿ ಡಾನ್ ಜಯರಾಜ್ ಕಥೆಯ ಸಿನಿಮಾದ ತಯಾರಿ ನಡೆಯುತ್ತಿರುವ ನಡುವೆಯೇ ಇದೀಗ ಅಂಡರ್ ವರ್ಲ್ಡ್ ಡಾನ್ ಅಮರ್ ಆಳ್ವ ಅವರ ಸಿನಿಮಾ ಬರಲಿದ್ದು ಅದರಲ್ಲಿ ನಟ ನಿರ್ದೇಶಕ ರಿಷಬ್ ಶೆಟ್ಟಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ.
![](https://daijiworld.ap-south-1.linodeobjects.com/iWeb/tvdaijiworld/img_tv247/mb-030620-rishab.jpg)
ಮಂಗಳೂರಿನಲ್ಲಿ ಭೂಗತ ಲೋಕದಲ್ಲಿ ಮುತ್ತಪ್ಪ ರೈ, ಎಂಪಿ ಜಯರಾಜ್, ಆಯಿಲ್ ಕುಮಾರ್ರಂತೆ ಚಿರಪರಿಚಿತರಾಗಿರುವ ಡಾನ್ ಅಮರ್ ಆಳ್ವ ಅವರನ್ನು 1992 ರಲ್ಲಿ ಶೂಟ್ ಮಾಡಿ ಹತ್ಯೆ ಮಾಡಲಾಗಿತ್ತು. ಜೀವನದಲ್ಲಿ 1980-90 ರ ದಶಕದಲ್ಲಿ ನಡೆದ ಘಟನಾವಳಿಗಳ ಈ ಸಿನಿಮಾಕ್ಕೆ ರಿಷಭ್ ಶೆಟ್ಟಿ ಅವರೇ ಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದು ನಿತೇಶ್ ಇದಕ್ಕೆ ಸಹಾಯ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಡಿಟೆಕ್ಟಿವ್ ದಿವಾಕರ್ ಪಾತ್ರದ ಮೂಲದ ಬೆಲ್ ಬಾಟಮ್ ಸಿನಿಮಾದಲ್ಲಿ ಜನಮನ ಗೆದ್ದಿದ್ದ ರಿಷಭ್ ಶೆಟ್ಟಿ ಇದೀಗ ಈ ಹೊಸ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದು 2021ಕ್ಕೆ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ. ಸದ್ಯ ರಿಷಬ್ ಶೆಟ್ಟಿ ರುದ್ರ ಪ್ರಯಾಗ, ಹರಿ ಕಥೆ ಗಿರಿಕಥೆ ಬೆಲ್ ಬಾಟಮ್ 2 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಇನ್ನು ಈ ಸಿನಿಮಾದ ನಿರ್ಮಾಣ ಯಾರು ಮಾಡುತ್ತಾರೆ ಎಂಬ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಾಗಿದೆ.