ಮುಂಬೈ, ಮೇ 26 (Daijiworld News/MB) : ಲಾಕ್ಡೌನ್ ಮಧ್ಯೆಯೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಚಿತ್ರೀಕರಣ ಆರಂಭ ಮಾಡಿದ್ದು ಇದಕ್ಕಾಗಿ ಪೊಲೀಸರಿಂದ ಅನುಮತಿಯನ್ನು ಪಡೆದುಕೊಂಡಿದ್ದಾರೆ.
![](https://daijiworld.ap-south-1.linodeobjects.com/iWeb/tvdaijiworld/img_tv247/mb-260520-akshay.jpg)
ಆರ್ ಬಾಲ್ಕಿ ಅವರ ನಿರ್ದೇಶನದಲ್ಲಿ ಅಕ್ಷಯ್ ಕುಮಾರ್ ಅವರು ಆಯುಷ್ಮಾನ್ ಭಾರತ್ ಅಭಿಯಾನದ ಭಾಗವಾಗಿ ಲಾಕ್ಡೌನ್ ನಂತರದ ಜವಾಬ್ದಾರಿ ಬಗ್ಗೆಗಿನ ಜಾಹೀರಾತಿನ ಚಿತ್ರೀಕರಣಕ್ಕಾಗಿ ಮುಂದಾಗಿದ್ದು ನಟ ನಿರ್ದೇಶಕರು ಮುಂಬೈನ ಕಮಲಿಸ್ತಾನ್ ಸ್ಟುಡಿಯೋದ ಸೆಟ್ನಲ್ಲಿ ೨ ಗಂಟೆಗಳ ಕಾಲ ಶೂಟಿಂಗ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತು ತಿಳಿಸಿರುವ ನಿರ್ದೇಶಕ ಆರ್. ಬಾಲ್ಕಿ, ಲಾಕ್ಡೌನ್ ಬಳಿಕ ನಮ್ಮ ಕಾರ್ಯದಲ್ಲಿ ಎಲ್ಲಾ ಸುರಕ್ಷತೆಯೊಂದಿಗೆ ಜವಾಬ್ದಾರಿಯುತವಾಗಿ ತೊಡಗಬೇಕು. ಶೂಟಿಂಗ್ ಸಂದರ್ಭದಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೊಲೀಸರಿಂದ ಅನುಮತಿ ಪಡೆದು ಚಿತ್ರೀಕರಣಕ್ಕೆ ಮುಂದಾದೆವು ಎಂದು ಹೇಳಿದ್ದಾರೆ
ಇನ್ನು ಈ ಚಿತ್ರೀಕರಣದ ಸಂದರ್ಭದಲ್ಲಿ ಕನಿಷ್ಠ ಜನರಿದ್ದು ಮಾಸ್ಕ್, ಸ್ಯಾನಿಟೈಸರ್ ಮೊದಲಾದವುಗಳನ್ನು ಕಡ್ಡಾಯವಾಗಿ ಬಳಸಲಾಗಿತ್ತು