ಮಂಗಳೂರು, ಸೆ19: ಎಷ್ಟು ದಿವಸ ಬದುಕುತ್ತೇನೆಂದು ನನಗೇ ಗೊತ್ತಿಲ್ಲ. ಆದ್ದರಿಂದ, ಇದೇ ನನ್ನ ಕಡೇಯ ಪತ್ರಿಕಾಗೋಷ್ಠಿ ಆಗಲೂ ಕೂಡಾ ಸಾಧ್ಯತೆಯಿದೆ. ಮುಂದಿನ ನವರಾತ್ರಿಯವರೆಗೂ ಇರುತ್ತೇನೋ ಇಲ್ಲವೋ ಗೊತ್ತಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದ್ದಾರೆ.
![](https://daijiworld.ap-south-1.linodeobjects.com/iWeb/tvdaijiworld/img_tv247/19092017poojari.jpg)
ಮಂಗಳೂರು ದಸರಾ ಸಂಬಂಧಿತ ಮಾಧ್ಯಮಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು, ತಮ್ಮ ಅನಾರೋಗ್ಯದ ಸಮಸ್ಯೆ ಕುರಿತು ಮಾತನಾಡುತ್ತ, ಮುಂಚಿನ ಹಾಗೆ ಪೂಜಾರಿಯಿಲ್ಲ. ನಾನು ಮಾತನಾಡುವಾಗ ನೀವು ಅದನ್ನು ತಿಳಿಯಬಹುದು. ಮಾತನಾಡುವಾಗ ತನ್ನಿಂದ ಸ್ವಲ್ಪ ತಪ್ಪಾದರೆ ಕ್ಷಮಿಸಿ. ಅನಾರೋಗ್ಯವಿದ್ದರೂ ಕೂಡಾ ನವರಾತ್ರಿಗೆ ತಯಾರಿ ನಡೆಸುವುದರಲ್ಲಿ ತೊಡಗಿಕೊಂಡಿದ್ದೇನೆ ಎಂದರು.
ಇದೇ ವೇಳೆ ನವರಾತ್ರಿ ಉತ್ಸವದ ಬಗ್ಗೆ ಮಾತನಾಡಿದ ಜನಾರ್ದನ ಪೂಜಾರಿ, ಮಂಗಳೂರಿನಲ್ಲಿ ಆಕರ್ಷಕ ದಸರಾಕ್ಕೆ ಭರದ ಸಿದ್ಧತೆ ಆರಂಭವಾಗಿದೆ. 9 ದಿನಗಳ ಕಾಲ ವೈಭವದ ನವರಾತ್ರಿ ಮಹೋತ್ಸವ ನಡೆಯಲಿದ್ದು, ಸೆಪ್ಟೆಂಬರ್ 21ರಂದು ಸಚಿವರೊಬ್ಬರಿಂದ ದಸರಾ ಮಹೋತ್ಸವ ಉದ್ಘಾಟನೆಗೊಳ್ಳಲಿದೆ. ಸೆಪ್ಟೆಂಬರ್ 30ರಂದು ಶಾರದಾ ಮಾತೆಯ ಶೋಭಾಯಾತ್ರೆ ನಡೆಯಲಿದ್ದು, ಈ ಶೋಭಾಯಾತ್ರೆಯಲ್ಲಿ 75ಕ್ಕೂ ಅಧಿಕ ಸ್ತಬ್ದ ಚಿತ್ರಗಳು ಭಾಗಿಯಾಗಲಿದೆ ಎಂದು ತಿಳಿಸಿದರು.