ಉಡುಪಿ,ಸೆ18: ಚುನಾವಣೆಗೆ ಸ್ಪರ್ಧಿಸಲು ಯಡಿಯೂರಪ್ಪನವರಿಗೆ ಬೇರೆ ಬೇರೆ ಜಿಲ್ಲೆಯಿಂದ ಬೇಡಿಕೆ ಬರುತ್ತಿದೆ ಆದರೆ ಅದರ ಬಗ್ಗೆ ಬಿಎಸ್ ವೈ ಇನ್ನೂ ನಿರ್ಧಾರ ಮಾಡಿಲ್ಲ.
![](https://daijiworld.ap-south-1.linodeobjects.com/iWeb/tvdaijiworld/img_tv247/18092017shoobada.jpeg)
ಸ್ಪರ್ಧೆಯ ಬಗ್ಗೆ ಯಡಿಯೂರಪ್ಪ ಅವರು ದ್ವಂಧ್ವದಲ್ಲಿದ್ದು ಎಲ್ಲಿಂದಲೇ ಸ್ಪರ್ಧಿಸಿದರು ಬಹುಮತದಿಂದ ಗೆಲ್ಲುತ್ತಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಎಲ್ಲೇ ಸ್ಪರ್ಧಿಸಿದರೂ ಅವರಿಗೆ ಸೋಲು ಖಚಿತ ಎಂದರು. ಡಿವೈಎಸ್ಪಿ ಗಣಪತಿ ನಿಗೂಢ ಸಾವು ಪ್ರಕರಣ ಹಾಗೂ ಸಿಐಡಿ ಅಧಿಕಾರಿಗಳು ಸಾಕ್ಷಿಗಳನ್ನು ಮುಚ್ಚಿ ಹಾಕಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಸರ್ಕಾರ ಸಿಐಡಿ ಅಧಿಕಾರಿಗಳ ಮೂಲಕ ಷಡ್ಯಂತ್ರ ಮಾಡಿದೆ. ಎಲ್ಲಾ ಕಡತಗಳನ್ನು ಅಳಿಸಲಾಗಿದೆ. ಪ್ರಕರಣದ ಹಿಂದೆ ಸಿಎಂ ಮತ್ತು ಜಾರ್ಜ್ ಇದ್ದಾರೆ ಅನ್ನೋದು ಸ್ಪಷ್ಟ ಎಂದರು.