ಪುತ್ತೂರು, ಸೆ16: ಕಡಬ ನೆಟ್ಟಣದ ವಿಜಯಾ ಬ್ಯಾಂಕ್ ಎಟಿಎಂನಲ್ಲಿ ಕಳ್ಳರ ತಂಡವೊಂದು ಹಣ ದೋಚಲು ವಿಫಲ ಯತ್ನ ನಡೆಸಿದೆ. ನೆಟ್ಟಣ ದುರ್ಗಾ ಕಾಂಪ್ಲೆಕ್ಸ್ನಲ್ಲಿರುವ ವಿಜಯ ಬ್ಯಾಂಕ್ ಎಟಿಎಂನಲ್ಲಿ ಸೆಕ್ಯೂರಿಟಿ ಗಾರ್ಡ್ ಇಲ್ಲದ ಸಮಯದಲ್ಲಿ ಕಳ್ಳರು ಒಳಗೆ ನುಗ್ಗಿ ಎಟಿಎಂ ದರೋಡೆಗೆ ಯತ್ನಿಸಿದ್ದಾರೆ.
![](https://daijiworld.ap-south-1.linodeobjects.com/iWeb/tvdaijiworld/img_tv247/16092017bank.jpg)
ಎಟಿಎಂ ಇರುವ ಕಟ್ಟಡದ ಮಾಲೀಕರ ಸಮಯ ಪ್ರಜ್ಞೆಯಿಂದ ದರೋಡೆಕೋರರು ಕಳವು ಯತ್ನವನ್ನು ಅರ್ಧದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ದರೋಡೆಕೋರರು ಎಟಿಎಂ ಒಳಗೆ ನುಗ್ಗಿದಾದ ಮಹಡಿಯಲ್ಲಿ ಶಬ್ಧ ಕೇಳಿ ಕಟ್ಟಡದ ಮಾಲೀಕ ಸುಧೀರ್ ಕುಮಾರ್ ಹೊರಬಂದು ಲೈಟ್ ಹಾಕಿದ್ದಾರೆ. ಕಟ್ಟಡದ ಮಾಲಕನನ್ನು ಕಂಡ ತಕ್ಷಣ ಕಳ್ಳರು ವಾಹನ ಹತ್ತಿ ಪರಾರಿಯಾಗಿದ್ದಾರೆ..
ಸೆಕ್ಯೂರಿಟಿ ಗಾರ್ಡ್ ಇಲ್ಲದ ವೇಳೆ ಎಟಿಎಂ ಕೇಂದ್ರಕ್ಕೆ ನುಗ್ಗಿದ ದರೋಡೆಕೋರರ ತಂಡ ಸಿಸಿಟಿವಿ ಕ್ಯಾಮೆರಾ ಹಾಗೂ ಸೈರನ್ ನ ಕನೆಕ್ಶ್ಘನ್ ತಪ್ಪಿಸಿ ಎಟಿಎಂ ಮೆಶಿನ್ ಒಡೆಯಲು ಮುಂದಾಗಿದ್ದಾರೆ. ಆದರೆ ದರೋಡೆಕೋರರ ಎಲ್ಲಾ ಪ್ರಯತ್ನ ವಿಫಲವಾಗಿದೆ. ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.