ಮಂಗಳೂರು ಸೆ16: ಜಿಲ್ಲೆಯಲ್ಲಿ ಕೋಮು ಗಲಭೆಗೆ ಆದಾಗ ಅದು ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡೋದು ಸಾಮಾನ್ಯ. ಆದ್ರೆ ಕೋಮುಸೌರ್ಹದತೆ, ಸಹಬ್ವಾಳೆಯ ಬದುಕು ಸುದ್ದಿಯಾಗೋದೇ ಇಲ್ಲ. ಕೃಷ್ಣಾಷ್ಟಮಿ ದಿನದಂದು ಮೊಸರು ಕುಡಿಕೆ ಉತ್ಸವದಲ್ಲಿ ಶಾಸಕ ಬಿ ಎ ಮೊಯ್ದೀನ್ ಬಾವ ಬೇರೇ ಬೇರೆ ಸ್ಥಳದಲ್ಲಿ ನಡೀತಾ ಇರೋ ಮೊಸರು ಕುಡಿಕೆ ಉತ್ಸವಕ್ಕೆ ಬೇಟಿ ನೀಡಿ, ಕೃಷ್ಣ ವೇಷಧಾರಿ ಮುದ್ದು ಕಂದಗಳನ್ನು ಎತ್ತಿ ಮುದ್ದಾಡಿ ಪ್ರೋತ್ಸಾಹಿಸಿದರು. ಇನ್ನೊಂದೆಡೆ ಕಲ್ಲಡ್ಕ ಪ್ರಭಾಕರ್ ಭಟ್ ಮುಸ್ಲಿಂ ಸಮುದಾಯದ ವಿವಾಹದ ಮೆಹಂದಿ ಕಾರ್ಯಕ್ರಮಕ್ಕೆ ಬೇಟಿ ಕೊಟ್ಟು ಮದುಮಗಳನ್ನು ಆಶೀರ್ವದಿಸಿದರು . ಇವೆರೆಡು ಘಟನೆಗಳು ದಕ್ಷಿಣ ಕನ್ನಡ ಸಹೋದರತೆಗೆ ಮತ್ತು ಸಾಮರಸ್ಯಕ್ಕೆ ಸಾಕ್ಷಿಯಾಯಿತು.
![](https://daijiworld.ap-south-1.linodeobjects.com/iWeb/tvdaijiworld/images6/allwyn_160917_bawa2.jpg)
![](https://daijiworld.ap-south-1.linodeobjects.com/iWeb/tvdaijiworld/images6/allwyn_160917_kpbhat1.jpg)
![](https://daijiworld.ap-south-1.linodeobjects.com/iWeb/tvdaijiworld/images6/allwyn_160917_bawa3.jpg)
![](https://daijiworld.ap-south-1.linodeobjects.com/iWeb/tvdaijiworld/images6/allwyn_160917_bawa1.jpg)
![](https://daijiworld.ap-south-1.linodeobjects.com/iWeb/tvdaijiworld/images6/allwyn_160917_kpbhat2.jpg)