ಮಂಗಳೂರು, ಸೆ16: ಗಲ್ಫ್ ರಾಷ್ಟ್ರ ದೋಹಾಕ್ಕೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಮಹಮ್ಮದ್ ಹನೀಫ್ ನನ್ನು ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದರು. ಕೇರಳ ಕಾಸರಗೋಡು ಮೂಲದ ಮಹಮ್ಮದ್ ಹನೀಫ್ ನಿಂದ ಸುಮಾರು 5 ಕೆ.ಜಿಯಷ್ಟು ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಆದರೆ ಆರೋಪಿಯನ್ನು ವಿಚಾರಣೆಗೆ ಒಳಪಡಿಸುವಾಗ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳ ಕೊಠಡಿಯಿಂದ ಮಹಮ್ಮದ್ ಹನೀಫ್ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ಪರಾರಿಯಾಗಿದ್ದಾನೆ.
![](https://daijiworld.ap-south-1.linodeobjects.com/iWeb/tvdaijiworld/img_tv247/16092017haneef.jpg)
ಮಹಮ್ಮದ್ ಹನೀಫ್ ಗಾಂಜಾ ಪ್ರಕರಣದ ಆರೋಪಿಯಾಗಿದ್ದು, ಗಲ್ಫ್ ರಾಷ್ಟ್ರ ದೋಹಾಕ್ಕೆ ತೆರಳಲು ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಅಧಿಕಾರಿಗಳು ಮಹಮ್ಮದ್ ಹನೀಫ್ ನನ್ನು ವಿಚಾರಿಸುವಾಗ ಆತನ ಬಳಿ ಗಾಂಜಾ ಪತ್ತೆಯಾಗಿತ್ತು. ಕೂಡಲೇ ಹನೀಫ್ ನನ್ನು ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ರೂ, ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ವಿಮಾನ ನಿಲ್ದಾಣದಿಂದ ಎಸ್ಕೇಪ್ ಆಗಿದ್ದಾನೆ.