ಸುಳ್ಯ ಸೆ14: ಗುತ್ತಿಗಾರಿನ ತಳೂರು ಎಂಬಲ್ಲಿ ಬಸ್ ಮತ್ತು ಜೀಪ್ ಮುಖಾಮುಖಿ ಡಿಕ್ಕಿಯಾಗಿ ಒರ್ವ ಸ್ಥಳದಲ್ಲೇ ಸಾವನಪ್ಪಿದ ಘಟನೆ ನಡೆದಿದೆ. ಸುಬ್ರಹ್ಮಣ್ಯದಿಂದ ಸುಳ್ಯ ಕಡೆಗೆ ಸರಕಾರಿ ಬಸ್ ಮತ್ತು ಸುಳ್ಯ ಕಡೆಯಿಂದ ಹರಿಹರ ಪಲ್ಲತಡ್ಕ ಕಡೆಗೆ ಹೋಗುತ್ತಿದ್ದ ಜೀಪ್ ಮುಖಮುಖಿ ಡಿಕ್ಕಿಯಾಗಿದೆ. ಪರಿಣಾಮ ಸುಬ್ರಹ್ಮಣ್ಯ ಹಾಲೇಮಜಲು ನಿವಾಸಿ ಶಶಿ, ಸ್ಥಳದಲ್ಲೇ ಸಾವನಪ್ಪಿದರೆ , ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
![](https://daijiworld.ap-south-1.linodeobjects.com/iWeb/tvdaijiworld/img_tv247/14092017_subramanya_acc3.jpg)
![](https://daijiworld.ap-south-1.linodeobjects.com/iWeb/tvdaijiworld/img_tv247/14092017_subramanya_acc2.jpg)
![](https://daijiworld.ap-south-1.linodeobjects.com/iWeb/tvdaijiworld/img_tv247/14092017_subramanya_acc1.jpg)