ಮಂಗಳೂರು ಸೆ12: ಯುವತಿಯೋರ್ವಳು ಮನೆಯಲ್ಲಿ ನೇಣಿಗೆ ಶರಣಾದ ಘಟನೆ ನಿನ್ನೆ ಸಂಜೆ ಸೋಮೇಶ್ವರದ ಉಚ್ಚಿಲದಲ್ಲಿ ನಡೆದಿದೆ. ಸ್ಪೂರ್ತಿ (22) ಆತ್ಮಹತ್ಯೆಗೈದ ಯುವತಿ.
![](https://daijiworld.ap-south-1.linodeobjects.com/iWeb/tvdaijiworld/images6/pearl_12917_sui1.jpg)
ತಂದೆ ವಿದೇಶದಲ್ಲಿದ್ದು, ತಾಯಿ ಹಾಗೂ ಸಹೋದರಿಯ ಜತೆಗೆ ವಾಸಿಸುತ್ತಿದ್ದ ಸ್ಪೂರ್ತಿ ಕೆಲ ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇತ್ತಿಚೇಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಕೌಂಟ್ಸ್ ಸೆಕ್ಷನ್ ನಲ್ಲಿ ಕೆಲಸಕ್ಕೆಂದು ಸೇರಿದ್ದು, ಆಸ್ಪತ್ರೆಯಲ್ಲಿ ನೀಡುತ್ತಿದ್ದ ಮಾನಸಿಕ ಕಿರುಕುಳ ತಾಳಲಾರದೆ ಈಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಇನ್ನು ಈ ಬಗ್ಗೆ ಸ್ಪೂರ್ತಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.