ಕಾಪು, ಮೇ. 09 (DaijiworldNews/AA): ತನ್ನ ವಾರ್ಷಿಕ ಬಜೆಟ್ನಲ್ಲಿ ಭಾರತೀಯ ಸೇನೆಗೆ 10 ಲಕ್ಷವನ್ನು ಮಜೂರು ಗ್ರಾಮ ಪಂಚಾಯತ್ ಮೀಸಲಿಟ್ಟಿದೆ. ಗಡಿ ಭಾಗದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯಿಂದಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಭವನೀಯ ಯುದ್ಧದ ಪರಿಸ್ಥಿತಿಯಲ್ಲಿ ಬೆಂಬಲ ನೀಡುವ ಉದ್ದೇಶದಿಂದ ಈ ಮೊತ್ತವನ್ನು ಮೀಸಲಿಡಲಾಗಿದೆ.

ರಾಷ್ಟ್ರದ ಹಿತಾಸಕ್ತಿ ಮತ್ತು ಭಾರತೀಯ ಸೈನಿಕರ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಪಂಚಾಯತ್ ನ ಎಲ್ಲಾ ಸದಸ್ಯರು ಸರ್ವಾನುಮತದಿಂದ ಈ ಹಂಚಿಕೆ ಮಾಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ವಳದೂರು ಮತ್ತು ಉಪಾಧ್ಯಕ್ಷೆ ಮಂಜುಳ ಆಚಾರ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಜೂರು ಗ್ರಾಮ ಪಂಚಾಯತ್ ತನ್ನ ದಕ್ಷ ಆಡಳಿತ ಮತ್ತು ಅಭಿವೃದ್ಧಿ-ಆಧಾರಿತ ಉಪಕ್ರಮಗಳಿಗೆ ಹೆಸರುವಾಸಿಯಾಗಿದೆ. ಗ್ರಾಮ ಪಂಚಾಯತ್ ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗಳೊಂದಿಗೆ ಹೆಜ್ಜೆ ಹಾಕಿದೆ. ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಭಾರತೀಯ ಸೇನಾ ಪಡೆಗಳ ಪ್ರತೀಕಾರವು ಹೆಮ್ಮೆಯ ಕ್ಷಣ ಎಂದು ಅವರು ಹೇಳಿದರು.
ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷದ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ, ಮಿಲಿಟರಿಗೆ ಸಾಧ್ಯವಿರುವ ಎಲ್ಲಾ ಬೆಂಬಲವನ್ನು ನೀಡುವುದು ತನ್ನ ಕರ್ತವ್ಯ ಎಂದು ಪಂಚಾಯತ್ ಘೋಷಿಸಿದೆ. ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರೊಂದಿಗೆ ನಡೆಸಿದ ಚರ್ಚೆಯ ಸಂದರ್ಭದಲ್ಲಿ, ಪಚಾಯತ್ನ ಈ ಕ್ರಮವನ್ನು ಅವರು ಶ್ಲಾಘಿಸಿದರು. ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ, ಪ್ರತಿಯೊಬ್ಬ ನಾಗರಿಕನು ಸೈನ್ಯದೊಂದಿಗೆ ನಿಲ್ಲಬೇಕು. ಮಜೂರು ಗ್ರಾಮ ಪಂಚಾಯತ್ನ ನಿರ್ಧಾರವು ದೇಶದಲ್ಲೇ ಮೊದಲನೆಯದು ಮತ್ತು ಇದು ಇತರ ಪಂಚಾಯತ್ಗಳಿಗೂ ಸ್ಫೂರ್ತಿ ನೀಡುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಮಜೂರು ಗ್ರಾಮ ಪಂಚಾಯತ್ನ ಈ ಐತಿಹಾಸಿಕ ಹೆಜ್ಜೆ ರಾಷ್ಟ್ರೀಯ ಅಗತ್ಯದ ಸಮಯದಲ್ಲಿ ತಳಮಟ್ಟದ ದೇಶಭಕ್ತಿ ಮತ್ತು ಸಕ್ರಿಯ ನಾಗರಿಕ ಜವಾಬ್ದಾರಿಗೆ ಉತ್ತಮ ಉದಾಹರಣೆಯಾಗಿದೆ.