ಹೆಡಿಂಗ್ಲೆ, ಜೂ. 25 (DaijiworldNews/AK): ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಶುಭ್ಮನ್ ಗಿಲ್ ಅವರ ನಾಯಕತ್ವ ಸವಾಲನ್ನು ಎದುರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದ ಬಹುತೇಕ ಅವಧಿಯಲ್ಲಿ ಭಾರತ ಪ್ರಾಬಲ್ಯದ್ದಲ್ಲಿ ಇದ್ದರು , ಅತಿಥೇಯರು ಐದು ವಿಕೆಟ್ಗಳ ಗೆಲುವು ಸಾಧಿಸಿದ್ದಾರೆ.

ಆದಾಗ್ಯೂ ಮುಖ್ಯ ಕೋಚ್ ಗೌತಮ್ ಗಂಭೀರ್, ಶುಭ್ಮನ್ ಗಿಲ್ ಸಾಧನೆಯನ್ನು ಅದರಲ್ಲೂ ಮುಖ್ಯವಾಗಿ ಮೊದಲ ಇನಿಂಗ್ಸ್ ನಲ್ಲಿ ಶತಕ ಗಳಿಸಿದ್ದನ್ನು ಕೊಂಡಾಡಿದ್ದಾರೆ. ನಾಲ್ಕನೇ ದಿನದವರೆಗೂ ಭಾರತ 2002ರಿಂದೀಚೆಗೆ ಹೆಡಿಂಗ್ಲೆಯಲ್ಲಿ ಮೊದಲ ಜಯ ದಾಖಲಿಸುತ್ತದೆ ಎಂಬ ನಿರೀಕ್ಷೆ ಇತ್ತು.
ಆದರೆ ಭಾರತದ ಎರಡನೇ ಇನಿಂಗ್ಸ್ ನಲ್ಲಿ ಬಾಲಂಗೋಚಿಗಳ ನೀರಸ ಪ್ರದರ್ಶನ ಹಾಗೂ ಇಂಗ್ಲೆಂಡ್ ದೊಡ್ಡಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದ್ದು, ಭಾರತದ ಪಾಲಿಗೆ ಮಾರಕವಾಯಿತು. ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಲ್ಲದೇ ಕಣಕ್ಕಿಳಿದ ಭಾರತ ತಂಡದ ನಾಯಕತ್ವ ಹೊಣೆಯನ್ನು ನಿಭಾಯಿಸಿದ ಗಿಲ್, ಭಾರತದ ಅತ್ಯಂತ ಕಿರಿಯ ಕ್ಯಾಪ್ಟನ್ ಎನಿಸಿಕೊಂಡರು. ಮೊದಲ ಬಾರಿಗೆ ನಾಯಕನಾಗಿ ಆತ ಶತಕ ಸಾಧಿಸಿದ ಎಂದು ಗಂಭೀರ್ ಶ್ಲಾಘಿಸಿದರು.