ನವದೆಹಲಿ, ಮಾ 19(DaijiworldNews/AK):ಮುಂಬರುವ ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಗೆ ‘ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ ಶರದ್ ಚಂದ್ರ ಪವಾರ್ ಬಣವು ತುತ್ತೂರಿ ಊದುತ್ತಿರುವ ವ್ಯಕ್ತಿಯ ಚಿತ್ರ ಒಳಗೊಂಡ ನೂತನ ಚಿಹ್ನೆಯನ್ನು ಬಳಸಲು ಇಂದು ಸುಪ್ರೀಂ ಕೋ ರ್ಟ್ ಅನುಮತಿ ನೀಡಿದೆ.
![](https://daijiworld.ap-south-1.linodeobjects.com/Linode/img_tv247/19-03-2024AKSUPREM_COURT.jpg)
ಶರದ್ ಪವಾರ್ ಬಣಕ್ಕೆ ತುತ್ತೂರಿ ಊದುತ್ತಿರುವ ವ್ಯಕ್ತಿಯ ಚಿತ್ರ ಒಳಗೊಂಡ ಚಿಹ್ನೆಯನ್ನು ಕಾಯ್ದಿರಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋ ರ್ಟ್ ಸೂಚಿಸಿದೆ.ಅಲ್ಲದೇ ಇತರೆ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗೆ ಈ ಚಿಹ್ನೆಯನ್ನು ನೀಡಬಾರದು ಎಂದೂ ಹೇಳಿದೆಯೆಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಎನ್ಸಿಪಿಯ ಅಜಿತ್ ಪವಾರ್ ಬಣಕ್ಕೆ ಸುಪ್ರೀಂ ಕೋ ರ್ಟ್ ಇಂ ಗ್ಲಿಷ್, ಹಿಂದಿ ಮತ್ತು ಮರಾಠಿ ಮಾಧ್ಯಮಗಳಲ್ಲಿ ಸಾರ್ವಜನಿಕ ಜಾಹೀರಾತುಗಳನ್ನು ನೀಡುವಂತೆ ಸೂಚಿಸಿದೆ.
ಪಕ್ಷದ ವಿಭಜನೆಯ ಬಳಿಕ ಮುಖಂಡ ಅಜಿತ್ ಪವಾರ್ ನೇತೃತ್ವದ ಬಣವು ಏಕನಾಥ ಶಿಂದೆ ನೇತೃತ್ವದ ಶಿವಸೇನೆ–ಬಿಜೆಪಿ ಮೈತ್ರಿ ಸರ್ಕಾರದ ಜೊತೆಗೆ ಗುರುತಿಸಿಕೊಂಡಿತ್ತು. ಚುನಾವಣಾ ಆಯೋಗವು ಇತ್ತೀಚೆಗೆ ಅಜಿತ್ ನೇತೃತ್ವದ ಬಣ ನಿಜವಾದ ಎನ್ಸಿಪಿಯ ಎಂದು ಮಾನ್ಯ ಮಾಡಿತ್ತು.
ಹೀಗಾಗಿ ಎನ್ಸಿಪಿಯ ಮೂಲ ಚಿಹ್ನೆ ಗೋಡೆ ಗಡಿಯಾರವು ಅಜಿತ್ ಪವಾರ್ ನೇತೃತ್ವದ ಬಣದಲ್ಲಿಯೇ ಉಳಿದಿತ್ತು.ಅಲ್ಲದೆ, ಶರದ್ ಪವಾರ್ ನೇತೃತ್ವದ ಬಣಕ್ಕೆ ‘ರಾಷ್ಟ್ರೀ ಯವಾದಿ ಕಾಂಗ್ರೆಸ್ ಪಾರ್ಟಿ –ಶರದ್ ಚಂದ್ರ ಪವಾರ್’ ಎಂ ಬ ಹೆಸರನ್ನು ಅಂತಿಮಗೊಳಿಸಿದ್ದ ಆಯೋ ಗ ಈ ಬಣಕ್ಕೆ ತುತ್ತೂರಿ ಊದುತ್ತಿರುವ ಮನುಷ್ಯನ ಚಿತ್ರವನ್ನು ಚಿಹ್ನೆಯಾಗಿ ಹಂಚಿಕೆ ಮಾಡಿತ್ತು.