ಶ್ರೀನಗರ, ಮಾ.26 (DaijiworldNews/PY): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯಕ್ಕಾಗಿ ಜಮ್ಮು-ಕಾಶ್ಮೀರ 17 ಕೋಟಿ. ರೂ. ದೇಣಿಗೆ ನೀಡಿದೆ.

"ಜಮ್ಮು- ಕಾಶ್ಮೀರವು ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣೆ ಅಭಿಯಾನಕ್ಕಾಗಿ 17 ಕೋಟಿ.ರೂ.ದೇಣಿಗೆ ನೀಡಿದೆ" ಎಂದು ಪ್ರಾಂತ ಸಹ ಸಂಘಚಾಲಕ ಗೌತಮ್ ಮೆಂಗಿ ಹೇಳಿದ್ದಾರೆ.
"44 ದಿನಗಳ ಅಭಿಯಾನದಲ್ಲಿ ಕೇಂದ್ರಾಡಳಿತ ಪ್ರದೇಶದ 4693 ಹಳ್ಳಿಗಳು ಹಾಗೂ ಪಟ್ಟಣಗಳಲ್ಲಿನ 6.37 ಲಕ್ಷ ಮನೆಗಳಿಗೆ ಭೇಟಿ ನೀಡಿದ ಸುಮಾರು 21,331 ಆರ್ಎಸ್ಎಸ್ ಕಾರ್ಯಕರ್ತರು ದೇಣಿಗೆ ಸಂಗ್ರಹ ಮಾಡಿದ್ದಾರೆ" ಎಂದು ತಿಳಿಸಿದ್ದಾರೆ.
"ರಾಮಮಂದಿರ ಕೇವಲ ದೇವಾಲಯವಲ್ಲ. ಬದಲಾಗಿ ಅದು ಭಾರತೀಯ ಸಂಸ್ಕೃತಿಯ ಭಾಗ. ಕೊರೊನಾ ಸಾಂಕ್ರಾಮಿಕದ ವೇಳೆ ಜಮ್ಮು-ಕಾಶ್ಮೀರದ 2,902 ಹಳ್ಳಿ ಹಾಗೂ ಪಟ್ಟಣಗಳಿಗೆ ಆರ್ಎಸ್ಎಸ್ನ ಕಾರ್ಯಕರ್ತರು 1.97 ಲಕ್ಷ ಆಹಾರ ಪೊಟ್ಟಣ ಸೇರಿದಂತೆ 1.36 ಲಕ್ಷ ಮಾಸ್ಕ್, 4,567 ಸ್ಯಾನಿಟೈಸರ್, 510 ಪಿಪಿಇ ಕಿಟ್ ಹಾಗೂ 58,716 ಪಡಿತರ ಕಿಟ್ಗಳನ್ನು ವಿತರಿಸಿದ್ದಾರೆ" ಎಂದಿದ್ದಾರೆ.
ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣೆ ಅಭಿಯಾನ ಜನವರಿ 15ರಂದು ಆರಂಭಗೊಂಡಿದ್ದು, ಫೆ.27ರಂದು ಮುಕ್ತಾಯವಾಗಿದೆ.