ಅಸ್ಸಾಂ, ಮಾ.19 (DaijiworldNews/HR): "ಅಸ್ಸಾಂನಲ್ಲಿ ಕಾಂಗ್ರೆಸ್ಗೆ ಅಧಿಕಾರ ಕೊಟ್ಟರೆ. ಪೌರತ್ವ ತಿದ್ದಪಡಿ ಕಾಯ್ದೆಯನ್ನು(ಸಿಎಎ) ಜಾರಿಯಾಗದಂತೆ ನೋಡಿಕೊಳ್ಳುತ್ತೇವೆ" ಎಂದು ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಕುರಿತು ಅಸ್ಸಾಂ ನ ದಿಬ್ರುಗರ್ ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಯಾವ ಧರ್ಮವೂ ದ್ವೇಷವನ್ನು ಕಲಿಸುವುದಿಲ್ಲ. ಬಿಜೆಪಿ ದ್ವೇಷವನ್ನು ಹರಡುವುದರ ಮೂಲಕ ಜನರನ್ನು ವಿಭಜಿಸುತ್ತಿದೆ" ಎಂದರು.
"ಬಿಜೆಪಿ ಜನರ ನಡುವೆ ವಿಭಜನೆಯನ್ನು ತರಲು ದ್ವೇಷವನ್ನು ಹರಡುತ್ತಿದ್ದು, ಕಾಂಗ್ರೆಸ್ ಜನರ ನಡುವಿನ ಪ್ರೀತಿಯನ್ನು ಉತ್ತೇಜಿಸುತ್ತದೆ" ಎಂದಿದ್ದಾರೆ.
ಇನ್ನು" ಆರ್ಎಸ್ಎಸ್ ಅನ್ನು ಕೂಡ ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ನಾಗ್ಪುರದಲ್ಲೊಂದು ಶಕ್ತಿ ಇದೆ. ಅದು ಇಡೀ ದೇಶವನ್ನು ನಿಯಂತ್ರಣ ಮಾಡಲು ಪ್ರಯತ್ನಿಸುತ್ತಿದೆ. ಆದರೇ, ಯುವಕರು ಇದನ್ನು ಆತ್ಮ ವಿಶ್ವಾಸ ಮತ್ತು ಪ್ರೀತಿಯಿಂದ ವಿರೋಧಿಸಬೇಕು" ಎಂದು ಹೇಳಿದ್ದಾರೆ.