ಬೆಂಗಳೂರು, ಜೂ. 25 (DaijiworldNews/AA): ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 225 ಕೋಟಿ ರೂಪಾಯಿಗಳ ವಂಚನೆ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.

ಸಿಬಿಐ ಮತ್ತು ಕೇಂದ್ರ ಸೈಬರ್ ಅಪರಾಧ ಸಂಸ್ಥೆಗಳಿಂದ ತನಿಖೆ ನಡೆಸುವಂತೆ ಅವರು ಪ್ರಕಟಣೆ ಹೊರಡಿಸಿದ್ದಾರೆ. ಸಿಎಂ ಡಿ.ಕೆ. ಶಿವಕುಮಾರ್ ಈ ವಿಷಯದಲ್ಲಿ ಮೌನ ವಹಿಸಿರುವುದನ್ನು ಪ್ರಶ್ನಿಸಿರುವ ಅವರು, ಈ ವಂಚನೆಯನ್ನು ಸರ್ಕಾರಿ ಅಧಿಕಾರಿಗಳ ತಾಂತ್ರಿಕ ಲೋಪ ಎಂದು ತಳ್ಳಿಹಾಕಲು ಸಾಧ್ಯವಿಲ್ಲ ಎಂದಿದ್ದಾರೆ.
"ಎರಡು ವರ್ಷಗಳಲ್ಲಿ ಕೆಲವು ಫಲಾನುಭವಿಗಳ ಖಾತೆಗಳನ್ನು ಪದೇ ಪದೇ ಬದಲಾಯಿಸಲಾಗಿದೆ. ಕೆಲವು ಖಾತೆಗಳನ್ನು ಹಲವಾರು ತಿಂಗಳುಗಳ ಬಳಿಕ ಮತ್ತೆ ಸಕ್ರಿಯಗೊಳಿಸಲಾಗಿದೆ" ಎಂದು ಆರೋಪಿಸಿದ್ದಾರೆ.
"2,11,000 ಮೃತ ಫಲಾನುಭವಿಗಳಿಗೆ ಸಂಭವಿಸಿದ ದಾಖಲೆಗಳನ್ನು ಗುರುತಿಸಲಾಗಿದ್ದರೂ, 77,376 ಮೃತ ಫಲಾನುಭವಿಗಳಿಗೆ ಸಂಬಂಧಿಸಿದ ಡಿಜಿಟಲ್ ಡೇಟಾವನ್ನು ಬಹಿರಂಗಪಡಿಸಿಲ್ಲ. ಈ ಕುರಿತಂತೆ ಸರ್ಕಾರ ವಿವರಣೆ ನೀಡಬೇಕು" ಒತ್ತಾಯಿಸಿದ್ದಾರೆ.