ಕೋಲ್ಕತ್ತಾ, ಮೇ. 16 (DaijiworldNews/AA): ಇತರ ಪಕ್ಷಗಳಿಗೆ ಹೋಗುವವರು ಹೋಗಲಿ. ನಾನು ಪಕ್ಷವನ್ನು ಮತ್ತೆ ಹೊಸದಾಗಿ ಕಟ್ಟುತ್ತೇನೆ ಮಾಜಿ ಸಿಎಂ, ಟಿಎಂಸಿ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಶುಕ್ರವಾರ ತಮ್ಮ ಕಲಿಘಾಟ್ ನಿವಾಸದಲ್ಲಿ ನಡೆದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಸಭೆಯಲ್ಲಿ ಮಾತನಾಡಿದ ಅವರು, "ಪಕ್ಷ ತೊರೆಯಲು ಇಚ್ಛಿಸುವವರು ಸ್ವತಂತ್ರವಾಗಿ ಹೋಗಬಹುದು. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸೋಲು ಕಂಡಿದ್ದರೂ ಪಕ್ಷ ಮತ್ತೆ ಎದ್ದು ನಿಲ್ಲಲಿದೆ" ಎಂದರು.
"ಇತರ ಪಕ್ಷಗಳಿಗೆ ಹೋಗುವವರು ಹೋಗಲಿ. ನಾನು ಪಕ್ಷವನ್ನು ಮತ್ತೆ ಹೊಸದಾಗಿ ಕಟ್ಟುತ್ತೇನೆ. ಉಳಿಯುವವರಿಗೆ ನನ್ನ ಮಾತು ಏನೆಂದರೆ, ಹಾನಿಗೊಳಗಾದ ಪಕ್ಷದ ಕಚೇರಿಗಳನ್ನು ಮರುನಿರ್ಮಿಸಿ, ಬಣ್ಣ ಹಚ್ಚಿ ಮತ್ತೆ ತೆರೆಯಿರಿ. ಅಗತ್ಯವಿದ್ದರೆ ನಾನು ಕೂಡ ಬಣ್ಣ ಹಚ್ಚುತ್ತೇನೆ. ತೃಣಮೂಲ ಕಾಂಗ್ರೆಸ್ ಯಾವತ್ತೂ ತಲೆಬಾಗುವುದಿಲ್ಲ. ಜನರ ತೀರ್ಪನ್ನು ದೋಚಲಾಗಿದೆ" ಎಂದು ತಿಳಿಸಿದರು.