ಬೆಂಗಳೂರು, ಮಾ. 06 (DaijiworldNews/AA): ಇಂದು ಸಿಎಂ ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್ ಮಂಡಿಸಲಿದ್ದಾರೆ. ಸಿಎಂ ಅವರ ಇಂದಿನ ಬಜೆಟ್ ಮೇಲೆ ದೊಡ್ಡ ನಿರೀಕ್ಷೆಗಳಿದೆ.

2026-27ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಡಿಸಲಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಎಂಬ ದಾಖಲೆಯನ್ನ ನಿರ್ಮಿಸಲಿದ್ದಾರೆ. ಸಿದ್ದರಾಮಯ್ಯರ ಈ ಬಜೆಟ್ ಮೇಲೆ ದುಡಿಯುವ ವರ್ಗ ಬಹಳ ದೊಡ್ಡ ಮಟ್ಟದ ನಿರೀಕ್ಷೆಯನ್ನು ಇಟ್ಟಿದೆ. .
ಬಜೆಟ್ ಪೂರ್ವ ಸಿದ್ಧತೆ ಸಭೆಯಲ್ಲಿ ಸಿಎಂ ವಿವಿಧ ವಲಯಗಳ ಸಂಘಟನೆಗಳೊಂದಿಗೆ ಸಭೆ ಮಾಡಿ, ಬೇಡಿಕೆಗಳ ಬಗ್ಗೆ ಚರ್ಚೆ ಮಾಡಿದ್ದರು. ಈಗ ಇಂದಿನ ಬಜೆಟ್ನಲ್ಲಿ ವಲಯಗಳಿಟ್ಟ ಬೇಡಿಕೆ ಸಂಬಂಧ ಸರ್ಕಾರ ನಿರೀಕ್ಷೆಗಳಿಗೆ ನೀರೆರೆಯುತ್ತಾ ಅನ್ನೋ ಕುತೂಹಲ ಹೆಚ್ಚಾಗಿದೆ. ಪ್ರಮುಖವಾಗಿ ಹೋಟೆಲ್ ಉದ್ಯಮ, ಟ್ಯಾಕ್ಸಿ, ಆಟೋ ಚಾಲಕರು, ಸಾರಿಗೆ ನೌಕರರು ಬೀದಿಬದಿ ವ್ಯಾಪಾರಿಗಳು, ಕೈಗಾರಿಕಾ ವಲಯಗಳು ಸೇರಿದಂತೆ ದುಡಿಯುವ ವರ್ಗದ ಚಿತ್ತ ಇಂದಿನ ಬಜೆಟ್ ಮೇಲೆ ಇದೆ.