ಬೆಂಗಳೂರು, ಜ. 06 (DaijiworldNews/AK): ಪತ್ರಿಕೆಗಳ ಮುಖಪುಟದಲ್ಲಿ ಅರಸು ಅವರ ದಾಖಲೆ ಮುರಿದಿದ್ದಾರೆ ಎಂದು ಹೆಮ್ಮೆಯಿಂದ ಜಾಹೀರಾತು ಕೊಟ್ಟಿದ್ದಾರೆ. ಸಂತೋಷ, ಆದರೆ ಸಿದ್ದರಾಮಯ್ಯ ರಾಜ್ಯದ ಸಿಎಂ ಆಗಿ, ತಮ್ಮ ಅವಧಿಯಲ್ಲಿ ಏನು ಸಾಧನೆ ಮಾಡಿದ್ದಾರೆ. ಅರಸು ಅವರು ಸುದೀರ್ಘವಾಗಿ ಸಿಎಂ ಆಗಿ ದಾಖಲೆ ಮಾಡಿದ್ದರು ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕಿಸಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅರಸು ಅವರು ಭೂಸುಧಾರಣಾ ಕಾಯ್ದೆಗಳನ್ನು ತಂದು ಬದಲಾವಣೆಗೆ ಕಾರಣರಾದರು. ಮಲ ಹೊರುವ ಅನಿಷ್ಟ ಪದ್ಧತಿ ತೊಲಗಿಸಿದರು, ವೃದ್ಧಾಪ್ಯ ವೇತನ, ವಿಧವಾ ವೇತನ ತಂದು ದನಿ ಇಲ್ಲದವರಿಗೆ ಅರಸು ದನಿ ಆಗಿದ್ದರು ಅಂಥ ಅರಸು ಅವರನ್ನು ಕಾಂಗ್ರೆಸ್ ನಿಂದ ಉಚ್ಛಾಟನೆ ಮಾಡಲಾಯ್ತು. ಅವರಿಗೆ ಅಧಿಕಾರ ನಡೆಸಲು ಬಿಟ್ಟಿದ್ರೆ ಪರಿಪೂರ್ಣ ಅವಧಿಗೆ ಸಿಎಂ ಆಗಿ ದಾಖಲೆ ಬರೆಯುತ್ತಿದ್ದರು ಎಂದರು.
ಇಂದಿರಾ ಗಾಂಧಿಯವರಿಗೆ ರಾಜಕೀಯ ಮರುಜನ್ಮ ಕೊಟ್ಟಿದ್ದು ಅರಸು. ಅರಸು ಅವರನ್ನು ಅಪಮಾನ ಮಾಡಿ ಉಚ್ಛಾಟನೆ ಮಾಡಿದ್ರು ಅದೇ ಇಂದಿರಾಗಾಂಧಿ ಅಂಥ ನಾಯಕನೊಬ್ಬನಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್. ಸಿದ್ದರಾಮಯ್ಯ ತಾವು ಈಗ ಅರಸು ದಾಖಲೆ ಮುರಿದಿದ್ದೇನೆ ಅಂತಿದ್ದಾರೆ. ಸಿದ್ದರಾಮಯ್ಯ ಮಾಡಿದ ಸಾಧನೆ ಏನು ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ. ಅರಸು ಅವರು ಅವಿರೋಧವಾಗಿ ಸಿಎಂ ಆಗಿ ಆಯ್ಕೆ ಆಗಿದ್ರು, 2013-2018 ರವರೆವರೆಗೆ ಸಿದ್ದರಾಮಯ್ಯ ಸಹ ಜನಪರ ಆಡಳಿತ ಕೊಟ್ಟಿದ್ದೇನೆ ಅಂದು ಕೊಂಡಿದ್ದಾರೆ.
ಆದ್ರೆ ಅಂತಹ ಸಿದ್ದರಾಮಯ್ಯ 2018ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪರಾಭವ ಆದ್ರು ಸಿದ್ದರಾಮಯ್ಯ ಈಗ ಈ ಅವಧಿಯಲ್ಲಿ ಏನು ಸಾಧನೆ ಮಾಡಿದ್ದಾರೆ ಸಿದ್ದರಾಮಯ್ಯ ಅದೃಷ್ಟದಿಂದ ಸಿಎಂ ಆದವರು, ಅವಕಾಶವಾದಿ ಮುಖ್ಯಮಂತ್ರಿ ಎಷ್ಟು ಲಕ್ಷ ಬಡ ಜನರಿಗೆ ಮನೆ ಕೊಟ್ಟಿದ್ದಾರೆ ಹೇಳಲಿ.
ಸಿದ್ದರಾಮಯ್ಯಗೆ ಸಿಎಂ ಆದ ಮೇಲೆ ಅಹಿಂದ ಮರೆತು ಹೋಯಿತು, ಬಡವರಿಗೆ ಮೀಸಲಿಟ್ಟ 14 ಸೈಟ್ ತಮ್ಮ ಕುಟುಂಬಕ್ಕೆ ಕೊಟ್ಟು, ಮುಡಾ ಸೈಟು ತಗೊಂಡು ಬಡವರಿಗೆ ಮೋಸ ಮಾಡಿ ಯಾರಿಗೂ ಗೊತ್ತಾಗದ ಹಾಗೇ ಸೈಟು ವಾಪಸ್ ಕೊಟ್ಟಿದ್ದು ಮರೆತು ಹೋಯಿತಾ?.
ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಕಾಂತರಾಜು ವರದಿ ಜಾರಿ ಮಾಡಿಲ್ಲ ಅದನ್ನು ಜಾರಿ ಮಾಡುವ ಇಚ್ಚಾಶಕ್ತಿ ಅವರಿಗೆ ಇರಲಿಲ್ಲ ಆ ವರದಿ ಕಸದ ಬುಟ್ಟಿಗೆ ಹಾಕಿ ಅಹಿಂದ ವರ್ಗಕ್ಕೆ ಈ ಮೂಲಕ ಅಪಮಾನ ಮಾಡಿ ಕನ್ನಡಿಗರಿಗೆ ಮೋಸ ಮಾಡಿದರು ಎಂದು ಆರೋಪಿಸಿದರು.