ಬೆಂಗಳೂರು, ನ. 10 (DaijiworldNews/AA): ವಿಧಾನಸೌಧದಲ್ಲೇ ಟೆರೆರಿಸ್ಟ್ಗಳನ್ನ ಇಟ್ಕೊಂಡು ಪರಪ್ಪನ ಅಗ್ರಹಾರದ ಟೆರೆರಿಸ್ಟ್ಗಳ ಬಗ್ಗೆ ಏನ್ ಚರ್ಚೆ ಮಾಡ್ತೀರಾ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಕುರಿತು ಮಾತನಾಡಿದ ಅವರು, "ಪರಪ್ಪನ ಅಗ್ರಹಾರದಲ್ಲಿ ಅಪರಾಧ ಮಾಡಿರುವವರ ರಕ್ಷಣೆಗೆ ಎಲ್ಲಾ ರೀತಿ ಸೌಲಭ್ಯಗಳನ್ನ ಕೊಡ್ತಿದ್ದಾರೆ. 3-4 ದಿನಗಳಿಂದ ವಿಡಿಯೋ ಹರಿದಾಡುತ್ತಿದೆ. ಸೆಂಟ್ರಲ್ ಜೈಲ್ನಲ್ಲಿ ಇದೇನು ಹೊಸದಲ್ಲ. ಹಿಂದೆ ಹಿರಿಯ ಅಧಿಕಾರಿಗಳ ನಡುವೆ ಘರ್ಷಣೆ ಆದಾಗ ದೊಡ್ಡ ರಾಜಕೀಯ ಆಗಿತ್ತು. ವಿಧಾನಸೌಧದಲ್ಲೇ ಟೆರೆರಿಸ್ಟ್ಗಳನ್ನ ಇಟ್ಕೊಂಡು ಪರಪ್ಪನ ಅಗ್ರಹಾರದ ಟೆರೆರಿಸ್ಟ್ಗಳ ಬಗ್ಗೆ ಏನು ಚರ್ಚೆ ಮಾಡ್ತೀರಾ" ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ಈ ಕುರಿತು ಗೃಹ ಸಚಿವರು ತನಿಖೆ ಮಾಡಿ, ಸತ್ಯಾಸತ್ಯತೆ ತಿಳಿದುಕೊಳ್ತೀನಿ ಅಂದಿದ್ದಾರೆ. ಜೈಲಿನಲ್ಲಿ ಏನ್ ನಡೆಯುತ್ತೆ ಅನ್ನೋದು ಪರಮೇಶ್ವರ್ ಅವರಿಗೆ ಗೊತ್ತಿಲ್ಲವಾ? ಮಾಧ್ಯಮಗಳಲ್ಲಿ ಯಾವ ರೀತಿ ಖೈದಿಗಳಿಗೆ ಸೌಲಭ್ಯ ಕೊಟ್ಟಿದ್ದಾರೆ ಅಂತ ವಿಡಿಯೋ ಬರ್ತಿದೆ. ರಾಜ್ಯದ ಜನತೆ ಮುಂದೆ ಎಲ್ಲವನ್ನು ತೋರಿಸಿದ್ದಾರೆ. ಹೀಗೆ ಇರೋವಾಗ ಯಾರ ಬಗ್ಗೆ ಯಾವ ವಿಷಯಕ್ಕೆ ತನಿಖೆ ಮಾಡ್ತೀರಾ ನೀವು? ನಿಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆ. ತನಿಖೆ ಮತ್ತೆ ಮಾಡಿ ಏನ್ ಮಾಡ್ತೀರಾ?" ಎಂದು ಕಿಡಿಕಾರಿದರು.
"ವ್ಯವಸ್ಥೆ ಯಾಕೆ ಹದಗೆಟ್ಟಿದೆ ಅಂತ ಸಿಎಂ ಮತ್ತು ಗೃಹ ಸಚಿವರನ್ನ ಕೇಳಬೇಕು. ಈ ಸರ್ಕಾರದ ವೈಫಲ್ಯ ಪ್ರತಿನಿತ್ಯ ಕಾಣ್ತಿದೆ. ಈ ಸರ್ಕಾರ ಸರಿಯಾದ ರೀತಿಯಲ್ಲಿ ನಡೆದಿದ್ದರೆ, ಸರ್ಕಾರವನ್ನು ಸರಿಯಾಗಿ ನಡೆಸಿದ್ದರೆ ಏನು ಆಗ್ತಿರಲಿಲ್ಲ. ಸಿಎಂ ಅವರು ಬಿಜೆಪಿ ಅವರಿಗೆ ಮಾನ ಇಲ್ಲ ಅಂತ ಹೇಳಿದ್ದಾರೆ. ಹಾಗಾದರೆ ಇವರಿಗೆ ಏನಿದೆ? ಸಿಎಂ ಅವರಿಗೆ ಏನಿದೆ? ರಾಜ್ಯದ ಸಿಎಂ ಆಗಿ ಅನುಭವ ಎಷ್ಟಿದೆ ನಿಮಗೆ. ಇಂತಹ ಅನುಭವ ಇಟ್ಟುಕೊಂಡು ಈ ರೀತಿ ನಡೆಯುವುದನ್ನು ಇಷ್ಟೊಂದು ಲೈಟ್ ಆಗಿ ತಗೊಂಡಿದ್ದೀರಾ. ಏನು ನಡೆದೇ ಇಲ್ಲದಂತೆ ಸಿಎಂ ಮಾತಾಡ್ತಾರೆ. ತಿಳಿದುಕೊಳ್ತೀನಿ ಅಂತ ಹೇಳ್ತಾರೆ. ನನಗೇನು ವಿಷಯ ಗೊತ್ತಿಲ್ಲ. ಸಿಎಂಗೆ ಇಂಟಲಿಜೆನ್ಸ್ ಇಲ್ಲವಾ. ಪ್ರತಿದಿನ ಬೆಳಗ್ಗೆ ಸಿಎಂ ಹತ್ತಿರ ಬರೋರು ಏನ್ ಮಾಹಿತಿ ಕೊಡ್ತಾರೆ? ಈ ರೀತಿ ಲಘುವಾಗಿ ಮಾತಾಡಿಕೊಂಡು ಕಾಲ ಹರಣ ಮಾಡ್ತಿದ್ದಾರೆ. ಇದೆಲ್ಲವನ್ನು ನೋಡಿದ್ರೆ ಇದೆಲ್ಲದ್ದಕ್ಕೂ ಇವರೇ ಪ್ರೋತ್ಸಾಹ ಕೊಡ್ತಾರೇನೋ ಅಂತ ಜನರ ಅಭಿಪ್ರಾಯ ಇದೆ" ಎಂದು ಹೇಳಿದರು.