ಬೆಂಗಳೂರು, ಜು. 05 (DaijiworldNews/AA): ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ಆಗೇ ಆಗ್ತಾರೆ. ಸಿದ್ದರಾಮಯ್ಯ ಬದಲಾವಣೆ ಆಗೋದು ಖಚಿತ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.

ಪ್ರಯತ್ನ ವಿಫಲವಾಗಿರಬಹುದು ಆದರೆ ಪ್ರಾರ್ಥನೆ ವಿಫಲವಾಗೊಲ್ಲ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಡಿಕೆಶಿ ಹಾಗೇ ಹೇಳಿರೋದ್ರಿಂದ ಅವರಿಗೆ ಸಿಎಂ ಆಸೆ ಇದೆ ಎಂದು ಅರ್ಥ ಅಲ್ವ. ಸಿದ್ದರಾಮಯ್ಯ ಬದಲಾವಣೆ ಆಗೋದು ಖಚಿತ. ಇದನ್ನ ನಾನು ಹೇಳೋದು ಅಲ್ಲ, ಕಾಂಗ್ರೆಸ್ ಶಾಸಕರೇ ಹೇಳ್ತಿದ್ದಾರೆ ಎಂದರು.
ಲಾಟರಿ ಸಿಎಂ ಅಂದವರು ಯಾರು? ಇಕ್ಬಾಲ್ ಹುಸೇನ್ ಡಿಕೆಶಿ ಸಿಎಂ ಆಗ್ತಾರೆ ಅಂತಾರೆ. ಕಾಂಗ್ರೆಸ್ ಶಾಸಕರೇ ಡಿಕೆಶಿ ಸಿಎಂ ಆಗ್ತಾರೆ ಅಂತಿದ್ದಾರೆ. ನಮ್ಮನ್ನ ಟೀಕೆ ಮಾಡೋದಲ್ಲ. ನಿಮ್ಮ ಪಕ್ಷವನ್ನು ಮೊದಲು ಸರಿ ಮಾಡಿ, ಅವರಿಗೆ ಮದ್ದು ಅರೆಯಿರಿ ಎಂದು ವಾಗ್ದಾಳಿ ನಡೆಸಿದರು.
ಡಿ.ಕೆ.ಶಿವಕುಮಾರ್ ದೇವಸ್ಥಾನಕ್ಕೆ ಹೋಗ್ತಿರೋದು ವರ ಪಡೆಯೋಕೆ. ಸಿಎಂ ಆಗೋ ಕಾಲ ಕೂಡಿ ಬರುತ್ತಿದೆ ಎಂದು ಅನ್ನಿಸುತ್ತೆ. ಅದಕ್ಕೆ ದೇವಸ್ಥಾನಕ್ಕೆ ಡಿಕೆಶಿ ಹೋಗ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಪಟ್ಟದಿಂದ ಇಳಿತಾರೆ. ಇದು ಗ್ಯಾರಂಟಿ ಎಂದು ಹೇಳಿದರು.