ನವದೆಹಲಿ, ಜೂ. 12 (DaijiworldNews/AK): ಭಾರತೀಯ ವಾಯುಪಡೆಗೆ ಸೇರಿದ ಅಪಾಚೆ ಹೆಲಿಕಾಪ್ಟರ್ ಪಂಜಾಬ್ನ ಪಠಾಣ್ಕೋಟ್ ಜಿಲ್ಲೆಯ ನಂಗಲ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹಲೆದ್ ಗ್ರಾಮದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಯಾವುದೇ ಹಾನಿಯಾಗಿಲ್ಲ. ಪಠಾಣ್ಕೋಟ್ ವಾಯುನೆಲೆಯಿಂದ ಟೇಕಾಫ್ ಆದ ಹೆಲಿಕಾಪ್ಟರ್ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದ ನಂತರ ಮುನ್ನೆಚ್ಚರಿಕೆಯಾಗಿ ತೆರೆದ ಮೈದಾನದಲ್ಲಿ ಇಳಿದಿದೆ ಎಂದು ವರದಿಯಾಗಿದೆ.
ಜೂನ್ 6 ರಂದು ಉತ್ತರ ಪ್ರದೇಶದ ಸಹರಾನ್ಪುರ ಬಳಿ ತರಬೇತಿ ಸಮಯದಲ್ಲಿ ಭಾರತೀಯ ವಾಯುಪಡೆಯ ಮತ್ತೊಂದು ಅಪಾಚೆ ಹೆಲಿಕಾಪ್ಟರ್ ಮುನ್ನೆಚ್ಚರಿಕೆಯಾಗಿ ಇಳಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.