ಬೆಂಗಳೂರು, ಜೂ. 10 (DaijiworldNews/AK):2018 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ವಿವಾದಾತ್ಮಕ ಭಾಷಣ ಮಾಡಿರುವ ಮಾಜಿ ಸಚಿವ, ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ವಿರುದ್ಧ ಬಿಸಿ ರೋಡ್ ಠಾಣೆ ಪೊಲೀಸರು ನಡೆಸುತ್ತಿದ್ದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ.

ಮಂಗಳೂರಿನ ಕಲಡ್ಕದಲ್ಲಿ ರಾಜೇಶ್ ನಾಯ್ಕ್ ಪರ ಚುನಾವಣಾ ಪ್ರಚಾರ ನಡೆಸುವ ಸಂದರ್ಭದಲ್ಲಿ ಉಗ್ರ ಭಾಷಣ ಮಾಡಿದ್ದ ಸುನೀಲ್ ಕುಮಾರ್ ರಾಮಬೇಕೋ, ಅಲ್ಲ ಬೇಕೋ ? ಎಂದು ಪ್ರಶ್ನೆ ಮಾಡಿದ್ದರು.
ಇದರ ವಿರುದ್ಧ ಅಂದಿನ ಸಚಿವ ರಮಾನಾಥ್ ರೈ ಪೊಲೀಸರ ಮೇಲೆ ಒತ್ತಡ ಹೇರಿ ಎಫ್ ಐಆರ್ ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಬಿ.ಸಿ.ರೋಡ್ ಪೊಲೀಸರು ಇತ್ತೀಚೆಗೆ ಆರೋಪಟ್ಟಿ ದಾಖಲಿಸಿ ವಿಚಾರಣೆ ಪ್ರಾರಂಭಿಸಿದ್ದರು.
ಇದಕ್ಕೆ ತಡೆ ನೀಡುವುಂತೆ ಸುನೀಲ್ ಕುಮಾರ್ ಪರ ವಕೀಲ ಮಹೇಂದ್ರ ಹೈಕೋರ್ಟ್ ಮೊರೆ ಹೋಗಿದ್ದು, ಮಂಗಳವಾರ ನ್ಯಾಯಾಲಯ ತಡೆ ನೀಡಿದೆ.