ಚಂಢೀಗಡ, ಜೂ. 04 (DaijiworldNews/AA): ಪಾಕ್ ಪರ ಬೇಹುಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಜ್ಯೋತಿ ಮಲ್ಹೋತ್ರಾ ಬೆನ್ನಲ್ಲೇ ಇದೀಗ ಪಂಜಾಬ್ನ ಮತ್ತೊಬ್ಬ ಯೂಟ್ಯೂಬರ್ ಬಂಧಿಸಲಾಗಿದೆ.

ಮೊಹಾಲಿಯಲ್ಲಿರುವ ರಾಜ್ಯ ವಿಶೇಷ ಕಾರ್ಯಚರಣೆಯ ಕೋಶ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಜಸ್ಟೀರ್ ಸಿಂಗ್ ಒಳಗೊಂಡ ಮಹತ್ವದ ಬೇಹುಗಾರಿಕೆ ಜಾಲವನ್ನು ಪತ್ತೆ ಹಚ್ಚಿದೆ.
ಶಂಕಿತ ವ್ಯಕ್ತಿ ಪಂಜಾಬ್ನ ರೋಪರ್ ಜಿಲ್ಲೆಯ ರೂಪನಗರದಲ್ಲಿರುವ ಮಹ್ಲಾನ್ ಗ್ರಾಮದ ನಿವಾಸಿ. "ಜಾನ್ ಮಹಲ್" ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿರುವ ಜಸ್ಬೀರ್ ಸಿಂಗ್, ಭಯೋತ್ಪಾದನಾ ಬೆಂಬಲಿತ ಬೇಹುಗಾರಿಕೆ ಜಾಲದ ಭಾಗವಾಗಿರುವ ಜುಟ್ ರಾಂಧವಾ ಎಂದೂ ಕರೆಯಲ್ಪಡುವ ಪಿಐಒ ಶಕೀರ್ ಜೊತೆ ಸಂಪರ್ಕ ಹೊಂದಿದ್ದಾರೆ.
ಯೂಟ್ಯೂಬರ್ ಹರಿಯಾಣ ಮೂಲದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಮತ್ತು ಪಾಕಿಸ್ತಾನಿ ಪ್ರಜೆ ಮತ್ತು ಹೊರಹಾಕಲ್ಪಟ್ಟ ಪಾಕ್ ಹೈಕಮಿಷನ್ ಅಧಿಕಾರಿ ಡ್ಯಾನಿಶ್ ಎಂದೂ ಕರೆಯಲ್ಪಡುವ ಎಹ್ಸಾನ್-ಉರ್-ರಹೀಮ್ ಅವರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.
ತನಿಖೆಯ ಪ್ರಕಾರ, ಜಸ್ಬೀರ್ ದೆಹಲಿಯಲ್ಲಿ ನಡೆದ ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ ಡ್ಯಾನಿಶ್ ಆಹ್ವಾನದ ಮೇರೆಗೆ ಭಾಗವಹಿಸಿದ್ದರು, ಅಲ್ಲಿ ಅವರು ಪಾಕಿಸ್ತಾನಿ ಸೇನಾ ಅಧಿಕಾರಿಗಳು ಮತ್ತು ವ್ಲಾಗ್ಗರ್ಗಳನ್ನು ಭೇಟಿಯಾಗಿದ್ದರು. ಸಿಂಗ್ ಮೂರು ಬಾರಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ. ವರ ಎಲೆಕ್ಟ್ರಾನಿಕ್ ಸಾಧನಗಳು ಪಾಕಿಸ್ತಾನ ಮೂಲದ ಬಹು ಸಂಖ್ಯೆಗಳನ್ನು ಹೊಂದಿರುವುದು ಕಂಡುಬಂದಿದೆ, ಅವುಗಳು ಈಗ ವಿವರವಾದ ವಿಧಿವಿಜ್ಞಾನ ಪರೀಕ್ಷೆಯಲ್ಲಿವೆ.