ನವದೆಹಲಿ, ಜೂ. 04 (DaijiworldNews/AK): ತನ್ನ ಇಂಗ್ಲಿಷ್ ಭಾಷೆಗಾಗಿ ಅಪಹಾಸ್ಯವನ್ನು ಎದುರಿಸಿ, ತನ್ನ ಜೀವನವನ್ನು ಪರಿವರ್ತಿಸಿಕೊಂಡು ಸಾಧನೆ ಮಾಡಿದ ವ್ಯಕ್ತಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಸುರಭಿ ಗೌತಮ್ ಯಶಸ್ಸಿನ ಕಥೆ ಇಲ್ಲಿದೆ.

ಒಂದು ಕಾಲದಲ್ಲಿ ಇಂಗ್ಲಿಷ್ ಭಾಷೆಯ ಮೇಲಿನ ತನ್ನ ಹೋರಾಟಕ್ಕಾಗಿ ಅಪಹಾಸ್ಯಕ್ಕೊಳಗಾಗಿದ್ದ ಸುರಭಿ ಗೌತಮ್ ಈಗ ಐಎಎಸ್ ಅಧಿಕಾರಿ. ಯುಪಿಎಸ್ಸಿ, ಇಸ್ರೋ ಮತ್ತು ಬಿಎಆರ್ಸಿ ಸೇರಿದಂತೆ ಎಂಟು ಪ್ರಮುಖ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಗಳನ್ನು ಗಳಿಸಿರುವುದರಿಂದ ಐಎಎಸ್ ಅಧಿಕಾರಿಯಾಗಿರುವುದು ಅವರ ಸಾಧನೆಗಳಲ್ಲಿ ಒಂದಾಗಿದೆ.
ಸುರಭಿ ಸತ್ನಾ ಗ್ರಾಮದಲ್ಲಿ ಬೆಳೆದಳು. ಆದರೆ ತನ್ನ ಹಳ್ಳಿಯಿಂದ ಉನ್ನತ ಶಿಕ್ಷಣಕ್ಕಾಗಿ ನಗರಕ್ಕೆ ತೆರಳಿದರು. ಅವರು ತನ್ನ 10 ನೇ ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು 90% ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಪೂರ್ಣಗೊಳಿಸಿದರು. ವಕೀಲರು ಮತ್ತು ಶಿಕ್ಷಕರಾಗಿದ್ದ ಆಕೆಯ ಪೋಷಕರು, ಕಠಿಣ ಪರಿಶ್ರಮದ ಮೌಲ್ಯ ಮತ್ತು ಶಿಕ್ಷಣದ ಮಹತ್ವವನ್ನು ಕಲಿಸಿದರು, ಇದು ಆಕೆಯ ಭವಿಷ್ಯದ ಯಶಸ್ಸನ್ನು ರೂಪಿಸಲು ಸಹಾಯ ಮಾಡಿತು.
ಸುರಭಿ ಭೋಪಾಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ನಲ್ಲಿ ಬಿಟೆಕ್ ಪದವಿ ಪಡೆಯಲು ಸೇರಿದಾಗ ನಿಜವಾದ ಸವಾಲು ಎದುರಾಯಿತು. ಹಿಂದಿ ಮಾಧ್ಯಮದ ಹಿನ್ನೆಲೆಯಿಂದಾಗಿ ಇಂಗ್ಲಿಷ್ನಲ್ಲಿ ಸಂವಹನ ನಡೆಸುವುದು ಕಷ್ಟಕರವಾಗಿತ್ತು. ಮೊದಲ ದಿನವೇ, ಸುರಭಿ ತನ್ನ ಸಹಪಾಠಿಗಳಿಂದ ಇಂಗ್ಲಿಷ್ನಲ್ಲಿ ತನ್ನನ್ನು ಪರಿಚಯಿಸಿಕೊಳ್ಳಲು ಹೆಣಗಾಡುತ್ತಿದ್ದಕ್ಕಾಗಿ ಅಪಹಾಸ್ಯಕ್ಕೊಳಗಾದರು, ಈ ಅನುಭವವು ಅವಳನ್ನು ಮುಜುಗರಕ್ಕೀಡು ಮಾಡಿತ್ತು. ಭೌತಶಾಸ್ತ್ರದ ತರಗತಿಯ ಸಮಯದಲ್ಲಿ, ಅವರಿಗೆ ಇಂಗ್ಲಿಷ್ನಲ್ಲಿ ಪ್ರಶ್ನೆ ಕೇಳಿದಾಗ ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ, ಅವರು ತಪ್ಪು ಉತ್ತರವನ್ನು ನೀಡಿದರು. ಈ ಎಲ್ಲಾ ಘಟನೆಯಿಂದ ಶಾಲೆ ಬಿಟ್ಟು ಮನೆಗೆ ಮರಳುವ ಬಗ್ಗೆ ಯೋಚಿಸಿದ್ದರು.
ಆದರೆ, ಅವರ ತಾಯಿಯ ಮಾತುಗಳೇ ಎಲ್ಲಾ ಬದಲಾವಣೆಗೆ ಕಾರಣವಾಯಿತು. ತನ್ನ ಇಂಗ್ಲಿಷ್ ಭಾಷೆಯನ್ನು ಸುಧಾರಿಸಲು, ಎಂಜಿನಿಯರಿಂಗ್ ಪುಸ್ತಕಗಳನ್ನು ಓದಲು ಮತ್ತು ಪ್ರತಿದಿನ ಹೊಸ ಪದಗಳನ್ನು ಕಲಿಯಲು ಅವಿಶ್ರಾಂತವಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಭಾಷಾ ತಡೆಗೋಡೆಯನ್ನು ನಿವಾರಿಸಿಕೊಂಡು ಸುರಭಿ ವಿಶ್ವವಿದ್ಯಾಲಯದಲ್ಲಿ ತನ್ನ ಮೊದಲ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಅಗ್ರಸ್ಥಾನ ಪಡೆದರು.ಸುರಭಿಯ ಯಶಸ್ಸು ಕಾಲೇಜು ಪರೀಕ್ಷೆಗಳೊಂದಿಗೆ ಕೊನೆಗೊಂಡಿಲ್ಲ. ಅವರು 2013 ರಲ್ಲಿ ಭಾರತೀಯ ಎಂಜಿನಿಯರಿಂಗ್ ಸೇವೆಗಳ (IES) ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದರು, ಮತ್ತು 2016 ರಲ್ಲಿ, ಅವರು UPSC ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಗಮನಾರ್ಹ 50 ನೇ ರ್ಯಾಂಕ್ ಗಳಿಸಿದರು, IAS ಅಧಿಕಾರಿಯಾದರು. ಸುರಭಿ ಇಸ್ರೋ ಮತ್ತು BARC ಸೇರಿದಂತೆ ಇತರ ಪ್ರತಿಷ್ಠಿತ ಪರೀಕ್ಷೆಗಳಲ್ಲಿಯೂ ಸಹ ಉತ್ತಮ ಸಾಧನೆ ಮಾಡಿದರು, ವೈವಿಧ್ಯಮಯ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದರು.