ಮಂಗಳೂರು, ಮಾ 24 (DaijiworldNews/MS): ಉದ್ಯಮಿ ಪತಿಯನ್ನು ಅಪಹರಿಸಿ ಅಕ್ರಮ ಬಂಧನದಲ್ಲಿರಿಸಿ, ಬಲವಂತವಾಗಿ ಮುಸ್ಲಿಂ ಯುವತಿಯ ಜೊತೆಗೆ ವಿವಾಹ ಮಾಡಲಾಗಿದೆ ಎಂದು ಮಹಿಳೆಯೋರ್ವರು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.

ಪತಿ ಬಿ.ಎಸ್. ಗಂಗಾಧರ್ ಅವರಿಗೆ 62 ವರ್ಷಗಳಾಗಿದ್ದು ಜನವರಿಯ ಕೊನೆಯ ವಾರದಿಂದ ಮನೆಗೆ ಬಂದಿರಲಿಲ್ಲ. ಫೆಬ್ರವರಿ ಎಂಟರಂದು ಕರೆ ಸ್ವೀಕರಿಸಿ ಮಾತನಾಡಿದ್ದರು. ಅನಂತರ ಕರೆ ಸ್ವೀಕರಿಸಲಿಲ್ಲ. ಪತಿಯ ಸ್ನೇಹಿತರೊಬ್ಬರು , ತನ್ನ ಪತಿಯನ್ನು ಮಾರ್ಚ್15ರಂದು ಮುಸ್ಲಿಂ ಯುವತಿಯೊಂದಿಗೆ ಬಲವಂತವಾಗಿ ವಿವಾಹ ಮಾಡಲಾಗಿದೆ ಎಂದು ಪೋಟೋ ತೋರಿಸಿದ್ದಾರೆ. ಈ ವಿಚಾರವನ್ನು ವಿದೇಶದಲ್ಲಿರುವ ಮಕ್ಕಳ ತಿಳಿಸಿದ್ದು, ಅದರಂತೆ ನ್ಯಾಯ ಒದಗಿಸಿಕೊಡಬೇಕು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಪಟ್ಟಂತೆ "ಮುಸ್ಲಿಂ ಹೆಣ್ಣುಮಕ್ಕಳನ್ನು ಮುಂದೆ ಬಿಟ್ಟು, 62 ವರ್ಷದ ಉದ್ಯಮಿಯನ್ನು ೨೨ರ ಮುಸ್ಲಿಂ ಯುವತಿ ಮದುವೆ ಮಾಡಿಸಿ ಇಸ್ಲಾಮಿಗೆ ಮತಾಂತರ ಮಾಡಲಾಗಿದ್ದು, ಇದು ಲವ್ ಜಿಹಾದ್ ತಂತ್ರವಾಗಿದ್ದು, ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ತನಿಖೆ ನಡೆಸಬೇಕೆಂದು" ವಿಶ್ವ ಹಿಂದೂ ಪರಿಷತ್ ನ ಶರಣ್ ಪಂಪ ವೆಲ್ ತನಿಖೆಗೆ ಒತ್ತಾಯಿಸಿದ್ದಾರೆ.