ಮಂಗಳೂರು, ಆ. 12 (DaijiworldNews/AA): ಬೋಬಿ ಚೆಮ್ಮನೂರು ಇಂಟರ್ನ್ಯಾಷನಲ್ ಜ್ಯುವೆಲ್ಲರ್ಸ್ ವತಿಯಿಂದ ಕ್ಲಾಕ್ ಟವರ್ ಸಮೀಪದ ಹಂಪನಕಟ್ಟೆಯಲ್ಲಿರುವ ಶೋರೂಂನಲ್ಲಿ ಆಗಸ್ಟ್ 12ರಂದು ಒಂದು ತಿಂಗಳ ಕಾಲ ನಡೆಯಲಿರುವ 'ಸ್ಪಾರ್ಕಲ್ ಡೈಮಂಡ್ ಫೆಸ್ಟ್' ಅನ್ನು ಅದ್ದೂರಿಯಾಗಿ ಉದ್ಘಾಟಿಸಲಾಯಿತು.

























ಜಗತ್ತಿನ ವಿವಿಧ ಭಾಗಗಳ ವಜ್ರ, ಅನ್ಕಟ್ ಡೈಮಂಡ್ ಹಾಗೂ ಅಮೂಲ್ಯ ಆಭರಣಗಳ ಆಕರ್ಷಕ ಸಂಗ್ರಹವನ್ನು ಉತ್ಸವದಲ್ಲಿ ಪ್ರದರ್ಶಿಸಲಾಗುತ್ತಿದ್ದು, ಮಂಗಳೂರಿನಲ್ಲಿನ ವಜ್ರಾಭರಣಗಳ ಪ್ರಿಯರಿಗೆ ವಿಶಿಷ್ಠ ಅನುಭವ ನೀಡಲಿದೆ. 'ಸ್ಪಾರ್ಕಲ್ ಡೈಮಂಡ್ ಫೆಸ್ಟ್' ಸೆಪ್ಟೆಂಬರ್ 12ರವರೆಗೆ ನಡೆಯಲಿದೆ.
ಜನಪ್ರಿಯ ಮಂಗಳೂರಿನ ನಟಿ ರುಹಾನಿ ಶೆಟ್ಟಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ, ಸಾಂಪ್ರದಾಯಿಕ ದೀಪ ಬೆಳಗಿಸಿ ಹಾಗೂ ರಿಬ್ಬನ್ ಕತ್ತರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರುಹಾನಿ ಶೆಟ್ಟಿ, ತಮ್ಮ ತವರು ಮಂಗಳೂರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಭಾಗವಾಗಿರುವುದಕ್ಕೆ ಸಂತಸವಾಗುತ್ತಿದೆ. ಮಂಗಳೂರಿಗೆ ಬಂದಾಗ ತಮಗೆ ವಿಶೇಷ ರೀತಿಯ ಉತ್ಸಾಹ ದೊರೆಯುತ್ತದೆ. ಈ ಸಂಭ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಿದ ಬೋಬಿ ಚೆಮ್ಮನೂರು ಇಂಟರ್ನ್ಯಾಷನಲ್ ಜ್ಯುವೆಲ್ಲರ್ಸ್ಗೆ ಧನ್ಯವಾದ ಸಲ್ಲಿಸಿದರು.
ಪ್ರದರ್ಶನದಲ್ಲಿದ್ದ ಆಭರಣಗಳ ಸಂಗ್ರಹವನ್ನು ಶ್ಲಾಘಿಸಿದ ಅವರು, ವಜ್ರದ ಆಭರಣಗಳು ತುಂಬಾ, ತುಂಬಾ ಸುಂದರವಾಗಿವೆ. ಗ್ರಾಹಕರು ಶೋರೂಂಗೆ ಭೇಟಿ ನೀಡಿ ಈ ವಿಶೇಷ ಉತ್ಸವದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಕರ್ನಾಟಕದಾದ್ಯಂತ ಇನ್ನೂ 10 ಹೊಸ ಶೋರೂಂಗಳನ್ನು ಆರಂಭಿಸಲು ಸಂಸ್ಥೆ ಯೋಜಿಸುತ್ತಿರುವುದು ಸಂತಸದ ಸುದ್ದಿಯಾಗಿದೆ. ಮಂಗಳೂರಿನ ಪ್ರತಿಭೆಗಳಿಗೆ ಜನರು ಇದೇ ರೀತಿ ನಿರಂತರ ಬೆಂಬಲ ನೀಡಬೇಕು ಎಂದು ರುಹಾನಿ ಶೆಟ್ಟಿ ಹೇಳಿದರು.
ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಎ.ಜೆ. ಶೆಟ್ಟಿ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಂಪನಿಯ ಹಿರಿಯ ಆಡಳಿತ ಮಂಡಳಿ ಸದಸ್ಯರು, ಪ್ರಾದೇಶಿಕ ಹಾಗೂ ಮಾರ್ಕೆಟಿಂಗ್ ತಂಡದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಿಎಫ್ಒ, ಮಾರ್ಕೆಟಿಂಗ್ ಝೋನಲ್ ಮ್ಯಾನೇಜರ್ ನಿಶಾಂತ್, ಪ್ರಾದೇಶಿಕ ವ್ಯವಸ್ಥಾಪಕರಾದ ಜಾರ್ಜ್, ಅನೀಶ್ ಹಾಗೂ ಪ್ರದೀಪ್ ಸೇರಿದಂತೆ ಮಾರ್ಕೆಟಿಂಗ್ ಮ್ಯಾನೇಜರ್ಗಳಾದ ನವ್ಫಲ್, ಸುಮಂತ್, ಸಂದೀಪ್, ಸಜಿತಾ ಹಾಗೂ ಮಿನಿ ನಾಯರ್ ಮತ್ತಿತರರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.
ಚೆಮ್ಮನೂರು ಗ್ರೂಪ್ ಪರವಾಗಿ ಚೆಮ್ಮನೂರು ಗ್ರೂಪ್ ಇಂಟರ್ನ್ಯಾಷನಲ್ನ ಮಾರ್ಕೆಟಿಂಗ್ ಜನರಲ್ ಮ್ಯಾನೇಜರ್ ಅನಿಲ್ ಸಿ.ಪಿ. ಉಪಸ್ಥಿತರಿದ್ದರು. ಪ್ರಾದೇಶಿಕ ವ್ಯವಸ್ಥಾಪಕ ಜಾರ್ಜ್, ಮಾರ್ಕೆಟಿಂಗ್ ಪ್ರಾದೇಶಿಕ ವ್ಯವಸ್ಥಾಪಕ ಅನೀಶ್, ಪ್ರಾದೇಶಿಕ ವ್ಯವಸ್ಥಾಪಕ ಜಯಪ್ರಕಾಶ್, ಶೋರೂಂ ವ್ಯವಸ್ಥಾಪಕ ವಿಶಾಖ್ ವೇಣು ಹಾಗೂ ಮಾರ್ಕೆಟಿಂಗ್ ಮ್ಯಾನೇಜರ್ ಕಿರಣ್ ಡೇನಿಯಲ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಆಗಸ್ಟ್ 12ರಿಂದ ಸೆಪ್ಟೆಂಬರ್ 12ರವರೆಗೆ ನಡೆಯಲಿರುವ 'ಸ್ಪಾರ್ಕಲ್ ಡೈಮಂಡ್ ಫೆಸ್ಟ್'ನಲ್ಲಿ ವಿಶೇಷವಾಗಿ ಆಯ್ಕೆ ಮಾಡಲಾದ ವಜ್ರಾಭರಣಗಳು, ಅನ್ಕಟ್ ಡೈಮಂಡ್ಗಳು ಹಾಗೂ ಅಮೂಲ್ಯ ಆಭರಣಗಳ ವೈವಿಧ್ಯಮಯ ಸಂಗ್ರಹವನ್ನು ಗ್ರಾಹಕರಿಗಾಗಿ ಪರಿಚಯಿಸಲಾಗಿದೆ. ಸೊಬಗು, ಕರಕುಶಲತೆ ಹಾಗೂ ಸಮಕಾಲೀನ ವಿನ್ಯಾಸಗಳ ಸಮಾಗಮವಾಗಿರುವ ಈ ಸಂಗ್ರಹವು ಒಂದೇ ಸೂರಿನಡಿ ಅತ್ಯುತ್ತಮ ಆಭರಣಗಳನ್ನು ವೀಕ್ಷಿಸುವ ಅವಕಾಶವನ್ನು ಗ್ರಾಹಕರಿಗೆ ಒದಗಿಸುತ್ತದೆ.
ಉತ್ಸವದ ಅಂಗವಾಗಿ ಗ್ರಾಹಕರಿಗೆ ಹಲವು ಆಕರ್ಷಕ ಕೊಡುಗೆಗಳನ್ನೂ ನೀಡಲಾಗುತ್ತಿದೆ. ವಜ್ರಾಭರಣಗಳ ಮೇಕಿಂಗ್ ಚಾರ್ಜ್ನಲ್ಲಿ 5,000 ರೂ. ವರೆಗೆ ರಿಯಾಯಿತಿ ಹಾಗೂ ಪ್ರತಿ ಖರೀದಿಗೂ ವಿಶೇಷ ಉಡುಗೊರೆಗಳು ಲಭ್ಯವಿವೆ. ರೂ. 12 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ವಜ್ರಾಭರಣ ಅಥವಾ ರೂ. 3 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಅನ್ಕಟ್ ಆಭರಣ ಖರೀದಿಸುವ ಗ್ರಾಹಕರಿಗೆ ಉಚಿತ ಚಿನ್ನದ ನಾಣ್ಯ ನೀಡಲಾಗುತ್ತದೆ.
ನಿಗದಿತ ಮೌಲ್ಯಕ್ಕಿಂತ ಹೆಚ್ಚಿನ ಖರೀದಿಗೆ ಬಿರಿಯಾನಿ ಪಾತ್ರೆ, ಮೂರು ಬರ್ನರ್ ಗ್ಯಾಸ್ ಸ್ಟೌವ್, ಊಟಿ ಅಥವಾ ತೆಕ್ಕಡಿಗೆ ಉಚಿತ ಪ್ರವಾಸ ಪ್ಯಾಕೇಜ್ ಹಾಗೂ ವಜ್ರದ ಉಂಗುರ ಸೇರಿದಂತೆ ವಿವಿಧ ಆಕರ್ಷಕ ಬಹುಮಾನಗಳೂ ಲಭ್ಯವಿವೆ. ಇದರ ಜೊತೆಗೆ, 'ಸ್ಪಾರ್ಕಲ್ ಡೈಮಂಡ್ ಫೆಸ್ಟ್'ನ ಬಂಪರ್ ಬಹುಮಾನವಾಗಿ ಕಿಯಾ ಸೆಲ್ಟೋಸ್ ಕಾರನ್ನು ಗೆಲ್ಲುವ ಅವಕಾಶವೂ ಗ್ರಾಹಕರಿಗಿದೆ.
ಅದ್ಧೂರಿ ಉದ್ಘಾಟನೆ, ವೈವಿಧ್ಯಮಯ ವಜ್ರಾಭರಣಗಳ ಸಂಗ್ರಹ ಹಾಗೂ ಆಕರ್ಷಕ ಕೊಡುಗೆಗಳೊಂದಿಗೆ 'ಸ್ಪಾರ್ಕಲ್ ಡೈಮಂಡ್ ಫೆಸ್ಟ್' ಮಂಗಳೂರು ಹಾಗೂ ಸುತ್ತಮುತ್ತಲಿನ ಆಭರಣ ಪ್ರಿಯರಿಗೆ ವಿಶೇಷ ಅನುಭವ ನೀಡುವ ನಿರೀಕ್ಷೆಯಿದೆ.
ಗ್ರಾಹಕರು ಮಂಗಳೂರಿನ ಹಂಪನಕಟ್ಟೆಯ ಕ್ಲಾಕ್ ಟವರ್ ಸಮೀಪದಲ್ಲಿರುವ ಬೋಬಿ ಚೆಮ್ಮನೂರು ಇಂಟರ್ನ್ಯಾಷನಲ್ ಜ್ಯುವೆಲ್ಲರ್ಸ್ ಶೋರೂಂಗೆ ಭೇಟಿ ನೀಡಿ, ಉತ್ಸವದಲ್ಲಿ ಭಾಗವಹಿಸಿ ತಮ್ಮ ಮೆಚ್ಚಿನ ಆಭರಣಗಳನ್ನು ಖರೀದಿ ಮಾಡಬಹುದಾಗಿದೆ.