ಮಂಗಳೂರು : ಸುಂದರ ನಗರ ಕಟ್ಟೋ ಭರದಲ್ಲಿ ಬಡವರ ಕಣ್ಣೀರು ಜಾರದಿರಲಿ - ಸಂಡೇ ಬಜಾರ್ನ ಸುತ್ತ ದೈಜಿ ಪ್ರೈಮ್ ಫೋಕಸ್!
Thu, Aug 06 2026 01:10:34 PM
ಮಂಗಳೂರು, ಆ. 06 (DaijiworldNews/TA): ಮಂಗಳೂರು ನಗರದಲ್ಲಿನ ಬೆಳವಣಿಗೆ ನೋಡುತ್ತಾ ಬೀದಿ ಬದಿಯಲ್ಲಿ ಜೀವನ ಕಟ್ಟಿಕೊಳ್ಳುತ್ತಿರುವ ಮುಗ್ಧ ಮನಸ್ಸುಗಳ ಕಣ್ಣೀರು ಇಂದು ಕಥೆಯಾಗಲು ಆರಂಭವಾಗಿದೆ. ನಗರದಲ್ಲಿ ಮತ್ತೊಮ್ಮೆ ಬೀದಿ ವ್ಯಾಪಾರಿಗಳ ಬದುಕಿನ ಹಕ್ಕಿನ ಕುರಿತು ಪ್ರಶ್ನೆ ಮೂಡಲಾರಂಭಿಸಿದೆ. ನಗರದ ಸೌಂದರ್ಯ, ಸಂಚಾರ ದಟ್ಟಣೆ ಮತ್ತು ಸಾರ್ವಜನಿಕ ಸ್ಥಳಗಳ ಬಳಕೆ ಒಂದು ಕಡೆ ಇದ್ದರೆ, ಮತ್ತೊಂದೆಡೆ ಸಾವಿರಾರು ಬಡ ಕುಟುಂಬಗಳ ಜೀವನೋಪಾಯದ ಪ್ರಶ್ನೆ ಎದುರಾಗಿದೆ.
ನಗರದಲ್ಲಿ ಕಳೆದ ಹಲವು ವರ್ಷಗಳಿಂದ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗಳು ನಡೆಯುತ್ತಲೇ ಬಂದಿವೆ. ಸಂಚಾರಕ್ಕೆ ಅಡ್ಡಿ, ಅಸ್ವಚ್ಛತೆ ಹಾಗೂ ಅನಧಿಕೃತ ವ್ಯಾಪಾರದ ಆರೋಪಗಳನ್ನು ಮುಂದಿಟ್ಟು ಹಲವಾರು ಬಾರಿ ವ್ಯಾಪಾರಿಗಳನ್ನು ಸ್ಥಳಾಂತರಿಸಲಾಗಿದೆ. ಆದರೆ, ಪ್ರತೀ ಬಾರಿ ಈ ಕ್ರಮಗಳ ವಿರುದ್ಧ ಪ್ರತಿಭಟನೆಗಳು, ರಾಜಕೀಯ ಚರ್ಚೆಗಳು ಹಾಗೂ ಕಾನೂನು ಹೋರಾಟಗಳು ನಡೆದಿವೆ.
ಇತ್ತೀಚೆಗೆ ಭಾನುವಾರದ ಸಂಡೇ ಬಜಾರ್ ತಾತ್ಕಾಲಿಕವಾಗಿ ಮುಚ್ಚಿದ ಬಳಿಕ ಬೀದಿ ವ್ಯಾಪಾರಿಗಳು ಮತ್ತೆ ರಸ್ತೆಗಿಳಿದು ತಮ್ಮ ವ್ಯಾಪಾರ ಆರಂಭಿಸಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪ್ರಕರಣಗಳನ್ನು ದಾಖಲಿಸಿದ ಘಟನೆ ನಗರದ ಗಮನ ಸೆಳೆದಿದೆ. ಈ ಬೆಳವಣಿಗೆಯ ನಡುವೆ ಆರೋಗ್ಯ ಸಚಿವ ಯು.ಟಿ. ಖಾದರ್, "ನಗರಗಳು ಶ್ರೀಮಂತರಿಗೆ ಮಾತ್ರವಲ್ಲ, ಬಡವರಿಗೂ ಸೇರಿವೆ" ಎಂದು ಹೇಳಿರುವುದು ಚರ್ಚೆಗೆ ಹೊಸ ಆಯಾಮ ನೀಡಿದೆ.
ಹಾಗಿದ್ರೆ ಮಾತಿಗೂ ನೀತಿಗೂ ಏನ್ ಸಂಬಂಧ? ಬೀದಿ ಬದಿ ವ್ಯಾಪಾರಿಗಳಿಗೆ ನ್ಯಾಯ ದೊರೆಯುವುದೇ, ಅವರ ಕಣ್ಣೀರಿನ ಕಥೆ ಏನು? ಸುಪ್ರೀಂ ಏನು ಹೇಳುತ್ತದೆ? ನಗರ ಸೌಂದರ್ಯವೂ ಮುಖ್ಯ, ಬದುಕಿನ ಹಕ್ಕೂ ಮುಖ್ಯ, ಆದರೆ ಇದನ್ನು ಸರಿದೂಗಿಸೋದು ಹೇಗೆ? ಈ ಎಲ್ಲಾ ವಿಚಾರ ತಿಳಿಯಬೇಕೆಂದರೆ ಲಾವಣ್ಯ ಶ್ರೀಧರ್ ಭಿತ್ತರಿಸಿರೋ ದೈಜಿವರ್ಲ್ಡ್ ಪ್ರೈಮ್ ಫೋಕಸ್ ವರದಿಯ ವೀಡಿಯೋ ವೀಕ್ಷಿಸಿ.