ಮಂಗಳೂರು, ಮಾ. 11 (DaijiworldNews/TA): ಮಿಲಾಗ್ರಿಸ್ ಕಾಲೇಜ್ ಮಂಗಳೂರು ಇದರ ವತಿಯಿಂದ ಅದ್ದೂರಿ ರಂಜಾನ್ ಇಫ್ತಾರ್ ಕೂಟ ಮಿಲಾಗ್ರಿಸ್ ಕಾಲೇಜ್ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮ ಮಿಲಾಗ್ರಿಸ್ ವಿದ್ಯಾಸಂಸ್ಥೆಯ ಕರೆಸ್ಪಾಂಡೆಂಟ್ ಫಾ ಬೊನವೆಂಚರ್ ನಜ್ರತ್ ಅಧ್ಯಕ್ಷತೆಯಲ್ಲಿ ನೆರವೇರಿತು.


ಈ ವೇಳೆ ಬದ್ರಿಯ ವಿದ್ಯಾಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಪ್ರೊ. ಇಸ್ಮಾಯಿಲ್ ಮಾತನಾಡಿ, ರಂಜಾನ್ ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ಅದರಲ್ಲೂ ಪವಿತ್ರ ಗ್ರಂಥ ಕುರಾನ್ ಭೂಮಿಗೆ ಪರಿಚಯಿಸಲ್ಪಟ್ಟ ತಿಂಗಳು ಕೂಡ ಹೌದು ಈ ಸಂದರ್ಭ ನಾವು ಕೇವಲ ಉಪವಾಸ ಇದ್ದು ಹಸಿವು ಕಟ್ಟಿ ಕೂರೋದು ಅಲ್ಲ ಈ ಮೂಲಕ ನಾವು ದುಶ್ಚಟದಿಂದ ದೂರವಿಡೋದು ಕೇವಲ ರಂಜಾನ್ ಸಮಯದಲ್ಲಿ ಮಾತ್ರ ಇದನ್ನು ನಾವು ಜೀವನದಲ್ಲಿ ಅಳವಡಿಸದೆ ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸುವಂತಾಗಬೇಕು ಎಂದವರು ಹೇಳಿದರು.
ಬಳಿಕ ಮಿಲಾಗ್ರಿಸ್ ವಿದ್ಯಾಸಂಸ್ಥೆಯ ಕರೆಸ್ಪಾಂಡೆಂಟ್ ಫಾ ಬೊನವೆಂಚರ್ ನಜ್ರತ್ ಮಾತನಾಡಿ, ರಂಜಾನ್ ಶಾಂತಿ ಸೌಹಾರ್ದತೆಯ ಹಬ್ಬ ಆಗಿದ್ದು ನಮ್ಮ ಸಂಸ್ಥೆಯಲ್ಲಿ ಯಾವುದೇ ಜಾತಿ ಧರ್ಮ ಭೇದ ಭಾವವಿಲ್ಲದೆ ಎಲ್ಲಾ ಧಾರ್ಮಿಕ ಹಬ್ಬಗಳನ್ನು ತುಂಬಾ ಅದ್ದೂರಿಯಾಗಿ ನಡೆಸಲಾಗುತ್ತದೆ. ಅದೇ ರೀತಿ ಇಂದು ರಂಜಾನ್ ಇಫ್ತಾರ್ ಕೂಟ ಆಯೋಜಿಸಲಾಗಿದೆ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ಆಗಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಮಿಲಾಗ್ರಿಸ್ ಕಾಲೇಜು ಪ್ರಾಂಶುಪಾಲ ಡಾ. ಆಲ್ವಿನ್ ಸೇರವೋ, ಕರ್ನಾಟಕ ರಾಜ್ಯ ಎಸ್ಎಸ್ಎಫ್ ಕ್ಯಾಂಪಸ್ ಕನ್ವೀನರ್ ಮೊಹಮ್ಮದ್ ಅಜ್ಮಲ್, ಎಸ್ಎಸ್ಎಫ್ ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ಕ್ಯಾಂಪಸ್ ಸೆಕ್ರೆಟರಿ ನೌಸೀಫ್ ಹುಸೈನ್, ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ನವಾಜ್ ನರಿಂಗಾನ, ಮಿಲಾಗ್ರಿಸ್ ಪಿ.ಯು ಕಾಲೇಜ್ ಪ್ರಾಂಶುಪಾಲ ಮೆಲ್ವಿನ್ ವಾಸ್, ಮಿಲಾಗ್ರಿಸ್ ನರ್ಸಿಂಗ್ ಕಾಲೇಜ್ ಪ್ರಾಂಶುಪಾಲ ಡಾ. ಡಿಯಾನಾ ಲೋಬೋ, ಮಿಲಗ್ರಿಸ್ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲ ಫಾ ಉದಯ್ ಫೆರ್ನಾಂಡಿಸ್, ವಿದ್ಯಾರ್ಥಿ ಕಾರ್ಯಕ್ರಮ ಸಂಯೋಜಕ ಶಬಿಲ್, ಪ್ರಭಾರಿ ಉಪನ್ಯಾಸಕ ಆಕಾಶ್ ಶೆಟ್ಟಿ, ಕಾರ್ಯಕ್ರಮದ ವಿಶೇಷ ಸಂಯೋಜಕಿ ಪ್ರೀಮಲ್ ರಿಯಾ ಕ್ರಾಸ್ತ, ಮತ್ತಿತರರು ಉಪಸ್ಥಿತರಿದ್ದರು.