ಉಳ್ಳಾಲ, ಫೆ. 23 (DaijiworldNews/TA): ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ ವತಿಯಿಂದ ಭಾನುವಾರ ನಡೆದ 'ನಮ್ಮ ನಡಿಗೆ ಮುಡಿಪು ಪುಣ್ಯ ಕ್ಷೇತ್ರದ ಕಡೆಗೆ' ಆಧ್ಯಾತ್ಮಿಕ ಜಾಥಾಕ್ಕೆ ಪಾನೀರ್ ಮೆರ್ಸಿಯಮ್ಮ ಚರ್ಚ್ ಬಳಿ ಚಾಲನೆ ನೀಡಲಾಯಿತು.


ವಿದಾನಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಪಾನೀರ್ ಚರ್ಚ್ ನಿಂದ ಮುಡಿಪು ಚರ್ಚ್ ವರೆಗಿನ ಭಕ್ತಿಪೂರ್ವ ನಡಿಗೆಯಿಂದ ಕೇವಲ ಪಾಲ್ಗೊಂಡವರಿಗೆ ಮಾತ್ರವಲ್ಲದೆ ಊರಿಗೇ ಶಾಂತಿ, ನೆಮ್ಮದಿ ಲಭಿಸಲಿದೆ ಎಂದು ಹೇಳಿದರು. ಆಶೀರ್ವಚನ ನೀಡಿದ ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಚರ್ಚ್ ಧರ್ಮಗುರು ಅತಿ ವಂದನೀಯ ಫಾದರ್ ಸಿಪ್ರಿಯನ್ ಪಿಂಟೋ, ಕಠಿಣ ಬಿಸಿಲಿನಲ್ಲಿ ಉಪವಾಸಧಾರಿಗಳಾಗಿ ಪುಣ್ಯ ಕ್ಷೇತ್ರದೆಡೆಗಿನ ನಡಿಗೆಯಿಂದ ಪ್ರತಿಯೊಬ್ಬರ ಮನ, ಸಮಾಜ, ಸಮುದಾಯದಲ್ಲಿ ಶಾಂತಿ, ಸಾಮರಸ್ಯ ಮೂಡಲಿದೆ ಎಂದು ತಿಳಿಸಿದರು.
ಪಾನೀರ್ ಚರ್ಚ್ ಧರ್ಮಗುರು ಫಾ.ವಿಕ್ಟರ್ ಡಿಮೆಲ್ಲೋ ನಡಿಗೆಗೆ ಚಾಲನೆ ನೀಡಿದರು. ಮುಡಿಪು ಚರ್ಚ್ ಪ್ರಧಾನ ಧರ್ಮಗುರು ಫಾ.ಆಸಿಸ್ಸಿ ರೆಬೆಲ್ಲೋ, ಬೋಳ ಚರ್ಚ್ ಧರ್ಮಗುರು ಪೀಟರ್ ಡಿಸೋಜ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ, ಕಥೊಲಿಕ್ ಸಭಾ ಕೇಂದ್ರೀಯ ಸಮಿತಿ ಅಧ್ಯಕ್ಷ ಸಂತೋಷ್ ಡಿಸೋಜ ಪಿಆರ್ ಒ ರಾಲ್ಫಿ ಡಿಕೋಸ್ತ, ಕಾರ್ಯದರ್ಶಿ ವಿಲ್ಮಾ ಮೊಂತೆರೋ, ದಾಯ್ಜಿವಲ್ಡ್ ಸಮೂಹ ಸಂಸ್ಥೆಯ ಸಂಸ್ಥಾಪಕ ವಾಲ್ಟರ್ ನಂದಳಿಕೆ, ಪಾನೀರ್ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಉರ್ಬನ್ ಫೆರಾವೋ, ಕಾರ್ಯದರ್ಶಿ ವಿನ್ನಿ ಕುಟಿನ್ಹಾ, ಮುಡಿಪು ಸಂತ ಜೋಸೆಫ್ ವಾಝ್ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಅರುಣ್ ಡಿಸೋಜ, ಕಾರ್ಯದರ್ಶಿ ರೋಶನ್ ಡಿಸೋಜ, ಕಥೊಲಿಕ್ ಸಭಾ ದಕ್ಷಿಣ ವಲಯ ಕಾರ್ಯದರ್ಶಿ ಟ್ರೆಸ್ಸಿ ರೋಡ್ರಿಗಸ್, ಪಾನೀರ್ ಘಟಕಾಧ್ಯಕ್ಷ ಐವನ್ ಮೊಂತೆರೋ ಉಪಸ್ಥಿತರಿದ್ದರು.