ಸುಳ್ಯ, ಫೆ. 15 (DaijiworldNews/TA): ಎಡಮಂಗಲ ಶ್ರೀ ಪಂಚಲಿಂಗೇಶ್ವರ ಜಾತ್ರೋತ್ಸವದ ಅಂಗವಾಗಿ 2 ನೇ ದಿವಸ ಫೆ. 13 ರಂದು ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ ಮತ್ತು ತರವಾಡು ಮಾಲೆಂಗ್ರಿ ಪಿಲಿಕುಂಜ ಸ್ಥಾನದಿಂದ ಶ್ರೀ ಮಹಾಲಿಂಗರಾಯ ದೈವದ ಭಂಡಾರ ಬಂದು ಓಲೆ ಸವಾರಿ ಕಾರ್ಯಕ್ರಮ ನಡೆಯಿತು.

ಹೊಸಮಜಲು ಕಟ್ಟೆಯಲ್ಲಿ ಮಹಾಪೂಜೆ, ಪ್ರಸಾದ ವಿತರಣೆ ನಡೆದ ಬಳಿಕ ರಾತ್ರಿ ನೆಲ್ಯಾರು ನೇಮ ಮತ್ತು ಉಳ್ಳಾಲ್ತಿ ನೇಮ ನಡೆಯಿತು. ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.