ಉಡುಪಿ, ಫೆ. 13 (DaijiworldNews/AK): ದಾಯ್ಜಿವಲ್ಡ್ ಉಡುಪಿ, ಕಿಶೂ ಎಂಟರ್ಪ್ರೈಸಸ್ ಆಯೋಜಿಸಿದ್ದ ಆಭರಣ್ ಜ್ಯುವೆಲ್ಲರಿ 'ಗೋದಲಿ ಸಡಗರ 2025' ಕ್ರಿಸ್ಮಸ್ ಗೋದಲಿ ಫೋಟೋ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ಫೆಬ್ರವರಿ 09 ರಂದು ಉಡುಪಿಯ ದಿ ಒರಿಜಿನಲ್ಸ್ ಆಭರಣ್ ಜ್ಯುವೆಲ್ಲರಿ ಸಿಲ್ವರ್ ಶೋ ರೂಂನಲ್ಲಿ ನಡೆಯಿತು. ಆಭರಣ್ ಜ್ಯುವೆಲ್ಲರ್ಸ್ನ ನಿರ್ದೇಶಕರಾದ ಸಾತ್ವಿಕ್ ಎಸ್ ಕಾಮತ್ ಮತ್ತು ವೀಣಾ ಎಂ ಕಾಮತ್; ದಾಯ್ಜಿವಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ; ಮತ್ತು ಕಿಶೂ ಎಂಟರ್ಪ್ರೈಸಸ್ನ ನಿರ್ದೇಶಕ ಕಿಶೋರ್ ಗೊನ್ಸಾಲ್ವಿಸ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು.































ದಾಯ್ಜಿವಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, "ಕ್ರಿಸ್ಮಸ್ ಒಂದು ಧರ್ಮದ ಆಚರಣೆಯಾಗಿದೆ, ಆದರೆ ಇದು ಜನರನ್ನು ಒಗ್ಗಟ್ಟಿನಲ್ಲಿ ಒಟ್ಟುಗೂಡಿಸುತ್ತದೆ. ಅಂತಹ ಸ್ಪರ್ಧೆಗಳಿಗೆ ಆಭರಣ್ ಜ್ಯುವೆಲ್ಲರ್ಸ್ ನೀಡಿದ ಬೆಂಬಲವು ಎಲ್ಲಾ ಸಮುದಾಯಗಳ ಗ್ರಾಹಕರೊಂದಿಗೆ ಅವರ ಬಲವಾದ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ. ಗೆಲುವು ಕೇವಲ ಔಪಚಾರಿಕತೆಯಾಗಿದೆ, ಭಾಗವಹಿಸಿದ ಪ್ರತಿಯೊಬ್ಬರು ನಿಜವಾಗಿಯೂ ವಿಜೇತರು." ಎಂದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಮೊಗರ್ನಾಡಿನ ಮದರ್ ಆಫ್ ಗಾಡ್ ಚರ್ಚ್ನ ನೋಯೆಲ್ ಲೋಬೊ ಅವರು ತಮ್ಮ ಅನುಭವವನ್ನು ಹಂಚಿಕೊಂಡು, “ಕ್ರಿಸ್ಮಸ್ ಋತುವಿನಲ್ಲಿ, ಕ್ರಿಶ್ಚಿಯನ್ ಸಮುದಾಯದ ಸದಸ್ಯರು ಸಾಂಪ್ರದಾಯಿಕವಾಗಿ ಗೋದಲಿಗಳನ್ನು ತಯಾರಿಸುತ್ತಾರೆ, ದಾಯ್ಜಿವಲ್ಡ್ ಉಡುಪಿ ಗೋದಲಿ ರಚನೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಿದೆ, ಅದಕ್ಕಾಗಿ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ಗೋದಲಿ ಯೇಸುಕ್ರಿಸ್ತನ ಜನನವನ್ನು ಪ್ರತಿನಿಧಿಸುತ್ತದೆ, ಮತ್ತು ನಾವು ಅದನ್ನು ವೀಕ್ಷಿಸದಿದ್ದರೂ, ಈ ಗೋದಲಿಯ ಮೂಲಕ ನಾವು ಅದನ್ನು ಪ್ರತಿಬಿಂಬಿಸಿ ನೋಡುತ್ತೇವೆ. . ನಾನು ದಾಯ್ಜಿವಲ್ಡ್ ಮತ್ತು ಅಭರಣ ಜ್ಯುವೆಲ್ಲರ್ಸ್ ಎರಡಕ್ಕೂ ಕೃತಜ್ಞನಾಗಿದ್ದೇನೆ.” ಎಂದರು.
ಪಡುಕೋಣೆಯ ಸೇಂಟ್ ಆಂಟನಿ ಚರ್ಚ್ನ ವಿನ್ಸೆಂಟ್ ಡಿಸೋಜಾ, ಮಾತನಾಡಿ, “ನಾವು ಗೋದಲಿಗಳ ಬಗ್ಗೆ ಯೋಚಿಸಿದಾಗ, ಯೇಸುಕ್ರಿಸ್ತನ ಜನನವು ನಮ್ಮ ಮನಸ್ಸಿಗೆ ಬರುತ್ತದೆ. ನಾವು ಅವರ ಬೋಧನೆಗಳನ್ನು ಅನುಸರಿಸೋಣ ಮತ್ತು ಹರಡೋಣ” ಎಂದು ಹೇಳಿದರು.
ಈ ಸಂದರ್ಭದಲ್ಲಿ, ದಿ ಒರಿಜಿನಲ್ಸ್ ಅಭರಣ ಜ್ಯುವೆಲ್ಲರಿ ವತಿಯಿಂದ ವಾಲ್ಟರ್ ನಂದಳಿಕೆ ಅವರಿಗೆ ಸನ್ಮಾನಿಸಲಾಯಿತು. ಅತಿಥಿಗಳು ವಿಜೇತರಿಗೆ ನಗದು ಬಹುಮಾನ, ಟ್ರೋಫಿ ಮತ್ತು ಪ್ರಮಾಣಪತ್ರವನ್ನು ವಿತರಿಸಿದರು.
ದಾಯ್ಜಿವಲ್ಡ್ ಉಡುಪಿ ಸ್ಟುಡಿಯೋದ ನಿರೂಪಕ ತೇಜೇಶ್ ಜೆ ಬಂಗೇರ ಸಭೆಯನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ದಾಯ್ಜಿವಲ್ಡ್ ಉಡುಪಿ ವ್ಯವಸ್ಥಾಪಕ ಕೆವಿನ್ ರೊಡ್ರಿಗಸ್; ಅಭರಣ ಜ್ಯುವೆಲ್ಲರ್ಸ್ ಪ್ರೈವೇಟ್ ಲಿಮಿಟೆಡ್ನ ಮಾರ್ಕೆಟಿಂಗ್ ಮ್ಯಾನೇಜರ್ ದಿನೇಶ್ ಶೆಟ್ಟಿಗಾರ್; ಅಭರಣ್ ಜ್ಯುವೆಲ್ಲರ್ಸ್, ದಾಯ್ಜಿವರ್ಲ್ಡ್ ಉಡುಪಿ ಸ್ಟುಡಿಯೋದ ಸಿಬ್ಬಂದಿ ಮತ್ತು ಇತರರು ಉಪಸ್ಥಿತರಿದ್ದರು.
ಫಲಿತಾಂಶ:
ಗುಂಪು ವಿಭಾಗ
ಪ್ರಥಮ ಬಹುಮಾನ: ಅವರ್ ಲೇಡಿ ಆಫ್ ರೋಸರಿ ವಾರ್ಡ್, ಮೊಗರ್ನಾಡ್
ದ್ವಿತೀಯ ಬಹುಮಾನ: ಅವರ್ ಲೇಡಿ ಆಫ್ ಮರ್ಸಿ ಚರ್ಚ್, ಮಂಜೇಶ್ವರ
ತೃತೀಯ ಬಹುಮಾನ: ಐಸಿವೈಎಂ, ಸೇಕ್ರೆಡ್ ಹಾರ್ಟ್ ಚರ್ಚ್, ಕೊಳಲಗಿರಿ
ಸಮಾಧಾನಕರ ಬಹುಮಾನಗಳು
ಹೋಲಿ ಕ್ರಾಸ್ ವಾರ್ಡ್, ಸೇಂಟ್ ಡೊಮಿನಿಕ್ ಚರ್ಚ್, ಅಶೋಕನಗರ
ICYM ಅಲಂಗಾರು ಘಟಕ, ಹೋಲಿ ರೋಸರಿ ಚರ್ಚ್, ಅಲಂಗಾರು
CKYM, ಕ್ರೈಸ್ಟ್ ಕಿಂಗ್ ಚರ್ಚ್, ಕಯ್ಯಾರ್, ಕಾಸರಗೋಡು
ಉದೇಂತಿ ಕಲಾಕಾರ್, ರೊಸಾರಿಯೋ ಕ್ಯಾಥೆಡ್ರಲ್, ಬೋಳಾರ
ICYM ಕಣಜಾರ್, ಅವರ್ ಲೇಡಿ ಆಫ್ ಲೂರ್ಡ್ಸ್ ಚರ್ಚ್, ಕಣಜಾರ್
ವೈಯಕ್ತಿಕ ವಿಭಾಗ
ಪ್ರಥಮ ಬಹುಮಾನ: ಫಾದರ್ ಫ್ರಾನ್ಸಿಸ್ ಕರ್ನೆಲಿಯೊ, ಸೇಂಟ್ ಆಂಟನಿ ಚರ್ಚ್, ಪಡುಕೋಣೆ
ದ್ವಿತೀಯ ಬಹುಮಾನ: ವಿಲಿಯಂ ಫೆರ್ನಾಂಡಿಸ್, ಹೋಲಿ ರೋಸರಿ ಚರ್ಚ್, ಹುಲಿದೇವರವಾಡ, ಅಂಕೋಲಾ
ತೃತೀಯ ಬಹುಮಾನ: ಜಾಯ್ಸನ್ ವೆರಾನ್ ಬಾಂಜ್, ಹೋಲಿ ಫ್ಯಾಮಿಲಿ ಚರ್ಚ್, ಬ್ರಹ್ಮಾವರ
ಸಮಾಧಾನಕರ ಬಹುಮಾನಗಳು
ನವೀನ್ ಪ್ರಕಾಶ್ ಕ್ವಾಡ್ರಾಸ್, ಹೋಲಿ ಕ್ರಾಸ್ ಚರ್ಚ್, ಪಾಂಬೂರು
ಶರೇಲ್ ಪ್ರೀನಿತಾ ಪಿರೇರಾ, ಸೇಂಟ್ ಜೋಸೆಫ್ ದಿ ವರ್ಕರ್ ಚರ್ಚ್, ನೀರ್ ಮಾರ್ಗ
ಕ್ಯಾರಲ್ ಸರಿತಾ ಡಿ'ಸೋಜಾ, ಸೇಂಟ್ ಪೀಟರ್ ಚರ್ಚ್, ಬಾರ್ಕೂರು
ರೋಜೆಸ್ ಡಿ'ಸೋಜಾ, ಮದರ್ ಆಫ್ ಗಾಡ್ ಚರ್ಚ್, ಮೊಗರ್ನಾಡ್
ಸೌಮ್ಯ ರಾಬರ್ಟ್, ಸೇಂಟ್ ಥಾಮಸ್ ಸಿರಿಯನ್ ಚರ್ಚ್, ಸಾಸ್ತಾನ