ಮಂಗಳೂರು, ಜ. 26 (DaijiworldNews/TA): ಎಸ್. ಪಿ. ವೈ. ಎಸ್. ಎಸ್. (ರಿ) ಕರ್ನಾಟಕ ಯೋಗ ಸಮಿತಿಯ ವತಿಯಿಂದ ದ.ಕ ಜಿಲ್ಲೆಯ ವಿವಿದೆಡೆ 16 ದೇವಾಲಯಗಳಲ್ಲಿ ರಥಸಪ್ತಮಿ ಪ್ರಯುಕ್ತ ಭಾನುವಾರ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಪ್ರಯುಕ್ತ ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರೀ ದೇವಸ್ಥಾನದಲ್ಲಿಯೂ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮುಂಜಾನೆ 4:45 ಕ್ಕೆ ಭಜನೆಯೊಂದಿಗೆ ಪ್ರಾರಂಭವಾಗಿ ಅಮೃತ ವಚನ ಪಂಚಾಂಗ ಪಠಣಾ, ಮಾನಸಿಕ ಸಿದ್ಧತೆ, ಉಸಿರಾಟ ಕ್ರಿಯೆ, ಗಣಪತಿ ನಮಸ್ಕಾರ ಮತ್ತು 3 ಹಂತಗಳ 9 ಆವೃತ್ತಿಯಲ್ಲಿ ಸಾಮೂಹಿಕ 108 ಸೂರ್ಯ ನಮಸ್ಕಾರ, ಅಮೃತಾಸನವನ್ನು ನುರಿತ ಯೋಗ ಶಿಕ್ಷಕರಿಂದ ಪ್ರಾತ್ಯಕ್ಷತೆಯ ಮೂಲಕ ನಡೆಸಲಾಯಿತು. ಬೆಳಗ್ಗೆ 7:00 ಗಂಟೆಗೆ ಯೋಗ ಮಂತ್ರದೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು. ಈ ಕಾರ್ಯಕ್ರಮದಲ್ಲಿ ಸುಮಾರು 550 ಕ್ಕೂ ಹೆಚ್ಚು ಯೋಗಬಂಧುಗಳ ಜೊತೆಗೆ ಸಾರ್ವಜನಿಕರು ಕೂಡ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಪೊಳಲಿ ನಗರ ಸಂಚಾಲಕರು ಜನಾರ್ಧನ್ ಪೆರಾರ, ನಗರದ ಪ್ರಮುಖರಾದ ಕೇಶವ ಕಾವೇರಿ, ಮೋಹನ್ ದಾಸ್ ಪೊಳಲಿ, ಅಶೋಕ ಪಾಲೇಮಾರ್, ಶಶಿರಾಜ್ ಪುಂಚಮೆ, ರಾಜೇಶ್ವರಿ ಪೊಳಲಿ, ಕುಮಾರ್ ಕೈಕಂಬ, ಕೃಷ್ಣ ಕೈಕಂಬ, ಅರುಣ್ ಆರಂಬೋಡಿ, ಶಶಿಕಲಾ ಕುಕ್ಕಿಪಾಡಿ, ಸುರೇಂದ್ರ ಸಿದ್ದಕ್ಕಟ್ಟೆ, ನಿತಿನ್ ಅರಳ, ಸುನೀತಾ ರಾಯಿ, ಕೃಷ್ಣಪ್ಪ ಆರಂಬೋಡಿ ಉಪಸ್ಥಿತರಿದ್ದರು.