ಸುಳ್ಯ, ಡಿ. 22 (DaijiworldNews/AK): ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಅಮೃತ ಮಹೋತ್ಸವ ಹಿನ್ನಲೆ ಯಲ್ಲಿ ವಸ್ತು ಪ್ರದರ್ಶನ ಮತ್ತು ಅಮೃತ ಮೇಳವು ಡಿ.27ರಿಂದ ಮೂರು ದಿನಗಳ ಕಾಲ ನಡೆಯಲಿದೆ ಎಂದು ವಸ್ತು ಪ್ರದರ್ಶನ ಸಮಿತಿ ವ್ಯವಸ್ಥಾ ನಿರ್ವಾಹಕ ಕೆ. ಗೋಕುಲ್ದಾಸ್ ತಿಳಿಸಿದರು.

ಅವರು ಸುಳ್ಯ ಸರಕಾರಿ ಪ.ಪೂ. ಕಾಲೇಜಿನ ಅಮೃತ ಮಹೋತ್ಸವ ಸಮಿತಿ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ, , ಶೈಕ್ಷಣಿಕ, ಔದ್ಯೋಗಿಕ, ಕೃಷಿ, ವ್ಯಾಪಾರ, ಆಹಾರ, ಆರೋಗ್ಯ ಮತ್ತು ತಾಂತ್ರಿಕ ವಿಷಯಗಳನ್ನು ಒಳಗೊಂಡ ವಸ್ತು ಪ್ರದರ್ಶನ 3 ದಿನಗಳ ಕಾಲ ನಡೆಯಲಿದೆ. ಸುಮಾರು 50ಕ್ಕೂ ಅಧಿಕ ಹೆಚ್ಚಿನ ಸ್ಟಾಲ್ಗಳನ್ನು ಹೊಂದಿದ್ದು, ಈಗಾಗಲೇ ನೋಂದಣಿ ಆರಂಭಗೊಂಡಿದೆ. ಇದಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದೆ. ಸ್ಟಾಲ್ಗಳಲ್ಲಿ ವಿವಿಧ ಶೈಕ್ಷಣಿಕ ವಿಭಾಗಗಳ ಮಾಹಿತಿ, ವೃತ್ತಿ ಮಾರ್ಗದರ್ಶನದ ಮಾಹಿತಿ ಸೇರಿದಂತೆ ಇತರೆ ವಿಭಾಗಗಳಿವೆ ಎಂದರು.
ಪ್ರದರ್ಶನದ ವಿಷಯಗಳಾಗಿ ಕೃಷಿ ಸಂಬಂಧಿತ ಮಳಿಗೆ, ವಾಹನ ಪ್ರದರ್ಶನ, ಮಾರಾಟ ಮಳಿಗೆ, ಆರ್ಥಿಕ ಸಂಸ್ಥೆಗಳ ಮಾಹಿತಿ, ಆಹಾರ ಮಳಿಗೆಗಳಿಗೆ ಪ್ರತ್ಯೇಕ ಸ್ಥಳವಕಾಶದ ಜೊತೆ ಬಟ್ಟೆ ಮತ್ತು ಅಲಂಕಾರಿಕ ವಸ್ತುಗಳ ಮಳಿಗೆ, ಪುಸ್ತಕ ಮಳಿಗೆ ಜೊತೆಗೆ ಆಕರ್ಷಣೀಯವಾಗಿ ಅಮ್ಯೂಸ್ಮೆಂಟ್ ಹಾಗೂ ಆಟೋಟ ಕೇಂದ್ರಗಳು ಇರಲಿದೆ ಎಂದರು.
ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ಮಾತನಾಡಿ, ಶೈಕ್ಷಣಿಕ ವಸ್ತು ಪ್ರದರ್ಶನದಲ್ಲಿ ಜಿಲ್ಲೆಯ 10ಕ್ಕೂ ಅಧಿಕ ವಿದ್ಯಾ ಸಂಸ್ಥೆಗಳು ಭಾಗವಹಿಸಲಿದ್ದು, ಕಲೆ, ವಿಜ್ಞಾನ, ಇತಿಹಾಸ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಪ್ರದರ್ಶನ ನಡೆಯಲಿದೆ ಎಂದರು. ಪ್ರಮುಖರಾದ ಲಿಂಗಪ್ಪಗೌಡ, ರಂಜಿತ್ ಅಡ್ತಲೆ ಸುದ್ದಿಗೋಷ್ಟಿಯಲ್ಲಿದ್ದರು.