ಕಾಸರಗೋಡು, ಡಿ. 14 (DaijiworldNews/TA): ಜಿಲ್ಲಾ ಪಂಚಾಯತ್ ನ ಪುತ್ತಿಗೆ ಮತ್ತು ಬೇಕಲ ಡಿವಿಜನ್ ನ ಮರುಮತ ಎಣಿಕೆ ಪೂರ್ಣಗೊಂಡಿದ್ದು, ಪುತ್ರಿಗೆ ಯಿಂದ UDF ನ ಜೆ. ಎಸ್ ಸೋಮಶೇಖರ ಹಾಗೂ ಬೇಕಲ ದಿಂದ LDF ನ ಟಿ.ವಿ ರಾಧಿಕಾ 267 ಮತಗಳ ಅಂತರಿಂದ ಗೆಲುವು ಸಾಧಿಸಿದ್ದಾರೆ.



ತೀವ್ರ ಹೋರಾಟಕ್ಕೆ ಈ ಎರಡು ಡಿವಿಜನ್ ಗಳು ಕಾರಣವಾಗಿದ್ದು, ಅಂತಿಮ ಕ್ಷಣದಲ್ಲಿ ಕನಿಷ್ಠ ಮತಗಳ ಅಂತರದಿಂದ ಇಬ್ಬರೂ ಆಯ್ಕೆಯಾಗಿದ್ದರು. ಇವರ ಆಯ್ಕೆಯನ್ನು ಪ್ರಶ್ನಿಸಿ ಸೋಮಶೇಖರ್ ರವರ ಪ್ರತಿಸ್ಪರ್ಧಿ ಬಿಜೆಪಿಯ ಮಣಿಕಂಠ ರೈ ಹಾಗೂ ರಾಧಿಕಾ ರವರ ಪ್ರತಿಸ್ಪರ್ಧಿ UDF ನ ಶಹಿದಾ ರಶೀದ್ ಮರು ಎಣಿಕೆಗೆ ಚುನಾವಣಾಧಿಕಾರಿ ಗೆ ಮನವಿ ಸಲ್ಲಿಸಿದ್ದರು.
ಈ ಹಿನ್ನಲೆ ಯಲ್ಲಿ ಮರು ಮತ ಎಣಿಕೆ ಆದಿತ್ಯವಾರ ಬೆಳಗ್ಗೆ ನಡೆಯಿತು. ಜಿಲ್ಲಾ ಪಂಚಾಯತ್ ನ 18 ಡಿವಿಜನ್ ನಲ್ಲಿ 9 ಸ್ಥಾನ ಪಡೆದು LDF ಅಧಿಕಾರ ಉಳಿಸಿಕೊಂಡಿದೆ. UDF 8 ಮತ್ತು ಬಿಜೆಪಿ ಒಂದು ಸ್ಥಾನ ಪಡೆದಿದೆ.