ಮಂಗಳೂರು, ಡಿ. 13 (DaijiworldNews/TA): ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು, ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ ಇದರ ಸಂಯುಕ್ತ ಆಶ್ರಯದ ಸೌಹಾರ್ದ ಕ್ರಿಸ್ಮಸ್ ಉತ್ಸವ 2025 ಮತ್ತು ವೈನ್ ಅಂಡ್ ಸ್ಪಿರಿಟ್ಸ್ ನ ಬೃಹತ್ ವೈನ್ ಮೇಳ ಮತ್ತು ಆಹಾರ ಮೇಳ ಕಾರ್ಯಕ್ರಮ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ನೆರವೇರಿತು.




































































ಕಾರ್ಯಕ್ರಮಕ್ಕೆ ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾದರ್ ಸುದೀಪ್ ಪೌಲ್ ಆಶೀರ್ವಚನ ನೀಡಿದರು. ಈ ವೇಳೆ ಕ್ರಿಸ್ಮಸ್ ಉತ್ಸವವನ್ನು ರಾಜ್ಯ ಮಟ್ಟದ ಸ್ಕೇಟಿಂಗ್ ಕ್ರೀಡಾಪಟು ಯುವರಾಜ್ ಡಿ. ಕುಂದರ್ ಅವರು ಕೇಕ್ ಕತ್ತರಿಸಿ ಉದ್ಘಾಟಿಸಿದರು. ಈ ಸಂದರ್ಭ ಸ್ಕೇಟಿಂಗ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಯುವರಾಜ್ ಡಿ. ಕುಂದರ್ ಅವರಿಗೆ ಗೌರವ ಸನ್ಮಾನ ನೆರವೇರಿತು.
ಕಾರ್ಯಕ್ರಮದಲ್ಲಿ ಸಂತ ಅಲೋಶಿಯಶ್ ಪರಿಗಣಿತ ವಿ.ವಿ. ನಿರ್ದೇಶಕ ಡಾ. ಚಾರ್ಲ್ಸ್ ಫುರ್ತಾಡೋ, ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ, ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ್ಯ ಶ್ಯಾಮ್ ಸುಂದರ್, ಕರ್ನಾಟಕ ಪ್ರವಾಸೋದ್ಯಮ ಮಂಡಳಿ ಸದಸ್ಯೆ ಶಾಲೆಟ್ ಪಿಂಟೋ, ಸಂತ ಮದರ್ ತೆರೇಸಾ ವಿಚಾರ ವೇದಿಕೆ ಅಧ್ಯಕ್ಷ ರೊಯ್ ಕ್ಯಾಸ್ಟಲಿನೋ, ಮಂಗ್ಳೂರ್ ಕ್ಯಾಥಲಿಕ್ ಸಭಾ ಮಂಗ್ಳೂರ್ ಪ್ರದೇಶ್ ಅಧ್ಯಕ್ಷ ಸಂತೋಷ್ ಡಿ’ಸೋಜಾ, ಸಂತೋಷ್ ಅರೇಂಜರ್ಸ್ ಮಾಲಕ ಸಂತೋಷ್ ಸೀಕ್ವೆರಾ, ಮಂಗ್ಳೂರ್ ಕ್ಯಾಥಲಿಕ್ ಸಭಾ ಮಂಗಳೂರ್ ಪ್ರದೇಶ್ ಕಾರ್ಯದರ್ಶಿ ವಿಲ್ಮಾ ಮೊಂಥೆರೋ, ಕಾರ್ಯಕ್ರಮ ಸಂಚಾಲಕ ಸ್ಟ್ಯಾನಿ ಲೋಬೊ, ಕೋಶಾಧಿಕಾರಿ ಡಾಲ್ಫಿ ಡಿಕೋಸ್ತಾ, ಮದರ್ ಥೆರೆಸಾ ವಿಚಾರ ವೇದಿಕೆ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.