ಕಾರ್ಕಳ, ನ. 17 (DaijiworldNews/AA): ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಡಿಯುವ ನೀರಿನ ಪೈಪ್ ಲೈನ್ ರಸ್ತೆ ಬದಿ ಕಸ ಸುಡಲು ಹಾಕಿದ ಬೆಂಕಿಗೆ ಸಿಲುಕಿ, ಸುಟ್ಟು ಕರಕಲಾಗಿ ಕುಡಿಯುವ ನೀರು ವ್ಯರ್ಥವಾಗಿ ಪೋಲಾಗುವಂತಾಯಿತು.


ನವೆಂಬರ್ 17ರ ಬೆಳಿಗ್ಗೆ ಸಾಣೂರು ಗ್ರಾಮ ಪಂಚಾಯತ್ ನ ಪಂಪ್ ಆಪರೇಟರ್ ಜಯಂತರವರು, ಸಾಣೂರು ಶ್ರದ್ಧಾನಂದರ ಕುಡ್ವರ ಮನೆಯ ಬಳಿ ಪೈಪ್ ಲೈನ್ ಬೆಂಕಿ ಬಿದ್ದು ಕರಕಲಾಗಿ ನೀರು ಪೋಲಾಗುತ್ತಾ ಇರುವುದನ್ನು ಗಮನಿಸಿದ್ದಾರೆ. ಬಳಿಕ ಈ ಬಗ್ಗೆ ಸ್ಥಳೀಯ ನಿವಾಸಿ ಶ್ರದ್ಧಾನಂದ ಕುಡ್ವರ ಅವರನ್ನು ವಿಚಾರಿಸಿದಾಗ ಕಸಕ್ಕೆ ಬೆಂಕಿ ಹಾಕಿರುವುದನ್ನು ಒಪ್ಪಿಕೊಂಡಿರುತ್ತಾರೆ.
ಇದನ್ನು ತಿಳಿದು ಸ್ಥಳಕ್ಕೆ ಧಾವಿಸಿದ ಸಾಣೂರು ಗ್ರಾಂ ಪಿಡಿಒ ವಿಶ್ವನಾಥ್ ಮತ್ತು ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರ ಸಂಸ್ಥೆಯ ಕನ್ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿಯವರು ಕೂಡಲೇ ಸುಟ್ಟು ಕರಕಲು ಆಗಿರುವ ಪೈಪ್ ಲೈನ್ ದುರಸ್ತಿ ಮಾಡಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಸರಿಪಡಿಸುವುದಾಗಿ ಸ್ಥಳೀಯ ನಾಗರಿಕರಿಗೆ ಭರವಸೆ ನೀಡಿದರು.