ಕಾಸರಗೋಡು,ನ. 06 (DaijiworldNews/AK): ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗೋಡೆಗೆ ಬಡಿದು ವಿದ್ಯಾರ್ಥಿನಿ ಮೃತಪಟ್ಟ ಘಟನೆ ಕುಂಬಳೆ ಪೂಕಟ್ಟೆ ಎಂಬಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.

ಬಂಬ್ರಾಣ ಚೂರಿತ್ತಡ್ಕ ನಿವಾಸಿ ರಝಾಕ್ -ರಂಶೀನಾ ದಂಪತಿಯ ಪುತ್ರಿ ರಿಸ್ವಾನ (15)ಮೃತ ಪಟ್ಟವಳು .
ರಿಸ್ವಾನಾ ಮತ್ತು ಗೆಳತಿ ಸ್ಕೂಟರಿನಲ್ಲಿ ಟ್ಯೂಷನ್ ಗೆ ಹೋಗುವಾಗ ದುರಂತ ಉಂಟಾಯಿತು. ಅಪಘಾತದ ಬೆನ್ನಲ್ಲೇ ಇಬ್ಬರನ್ನೂ ಕುಂಬಳೆ ಸೇವಾ ಸಹಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ಗಂಭೀರ ಗಾಯಗೊಂಡ ರಿಸ್ವಾನ ಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲಾಗಲಿಲ್ಲ. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.