ಉಡುಪಿ,ಅ. 28 (DaijiworldNews/AK): ಉರುಳಿಗೆ ಬಿದ್ದ ಚಿರತೆಯನ್ನುಅರಣ್ಯ ಅಧಿಕಾರಿಗಳು ರಕ್ಷಿಸಿ ಸೆರೆ ಹಿಡಿದಿರುವ ಘಟನೆ ಹೆಬ್ರಿ ಸಮೀಪದ ಮುದ್ರಾಡಿಯಲ್ಲಿ ನಡೆದಿದೆ.



ಹೆಬ್ರಿ ಸಮೀಪದ ಮುದ್ರಾಡಿಯ ಅರಣ್ಯ ಪ್ರದೇಶದಲ್ಲಿ ಹಂದಿಗೆ ಇರಿಸಲಾಗಿದ್ದ ಕಂಬಿಯ ಉರುಳಿಗೆ ಸಿಲುಕಿ ಬಿದ್ದಿದೆ. ಉರುಳು ಸುತ್ತಿದ ಗೂಟದೊಂದಿಗೆ ಒದ್ದಾಡುತ್ತಿರುವ ಚಿರತೆಯನ್ನು ಸ್ಥಳೀಯರು ಗಮನಿಸಿದ್ದಾರೆ. ಗಾಯಗೊಂಡ ಚಿರತೆ ವ್ಯಘ್ರವಾಗಿದ್ದ ಕಾರಣ ಸ್ಥಳೀಯರು ಸಮೀಪಕ್ಕೆ ಹೋಗಿಲ್ಲ. ಬಳಿಕ ಸ್ಥಳೀಯರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿ , ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಅರವಳಿಕೆ ಕೊಟ್ಟು ಚಿರತೆಯನ್ನು ರಕ್ಷಿಸಿದ್ದಾರೆ.
ಪಶು ವೈದ್ಯರಾದ ಡಾಕ್ಟರ್ ಮೇಘನಾ, ಡಾಕ್ಟರ್ ಯಶಸ್ವಿನಿ ಮತ್ತು ಉಚ್ಚು ಟ್ರಸ್ಟ್ ನ ಅಕ್ಷಯ್ ಶೇಟ್ ಈ ಕಾರ್ಯಾಚರಣೆಯಲ್ಲಿ ನೆರವು ನೀಡಿದರು. ರಕ್ಷಿಸಲ್ಪಟ್ಟ ಚಿರತೆಯನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.