ಕಾರ್ಕಳ, ಆ. 21 (DaijiworldNews/TA): ಪೆಟ್ರೋಲ್ ಸೋರಿಕೆಯಾಗಿ ಕಾರೊಂದು ಹೊತ್ತಿ ಉರಿದ ಘಟನೆ ಸಾಣೂರು ಪೆಟ್ರೋಲ್ ಬಂಕ್ ಸಮೀಪದ ರಾಷ್ಟ್ರೀಯ ಹೆದ್ದಾರಿ-169ರಲ್ಲಿ ಸಂಭವಿಸಿದೆ. ಇವತ್ತು ಮಧ್ಯಾಹ್ನ ಸುಮಾರು 1.00 ಗಂಟೆಯ ವೇಳೆಗೆ ಮೂಡುಬಿದಿರೆ ಕಡೆಗೆ ಕೆಎ ೦4 ಎಂ 1166 ಕಾರು ಘಟನೆಯಲ್ಲಿ ಸಂಪೂರ್ಣವಾಗಿ ಹಾನಿಗೊಳಗಾಗಿದೆ ಎಂದು ತಿಳಿದುಬಂದಿದೆ.


ಬಂಗ್ಲೆಗುಡ್ಡೆಯ ಅಯಾನ್ ಎಂಬವರು ಕಾರನ್ನು ವ್ಯಕ್ತಿಯೊಬ್ಬರಿಂದ ಖರೀದಿಸಿದ್ದರು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಅಗಮಿಸಿ ಬೆಂಕಿನಂದಿಸಿದ್ದಾರೆ. ಕಾರ್ಯಚರಣೆಯಲ್ಲಿ ಅಗ್ನಿಶಾಮಕದಳ ಠಾಣಾಧಿಕಾರಿ ಅಲ್ಬಟ್೯ ಮೋನಿಸ್, ಸಹಾಯಕಠಾಣಾಧಿಕಾರಿ ಚಂದ್ರಶೇಖರ್, ಸಹಾಯಕರಾದ ಅಚ್ಚುತ ಕರ್ಕೇರಾ, ದಿನೇಶ್ ಚಾಲಕ ಜಯಮೂಲ್ಯ ಪಾಲ್ಗೊಂಡರು.