ಕಾಸರಗೋಡು, ಜು. 15(DaijiworldNews/AK): ಲಾರಿ ಬಡಿದು ಇಬ್ಬರು ಕಾರ್ಮಿಕರು ಮೃತಪಟ್ಟು , ಓರ್ವ ಗಂಭೀರ ಗಾಯಗೊಂಡ ಘಟನೆ ಮಂಗಳವಾರ ಸಂಜೆ ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರ ಕುಂಜತ್ತೂರು ಎಂಬಲ್ಲಿ ನಡೆದಿದೆ.



ಬಿಹಾರ ಮೂಲದ ರಾಜ್ ಕುಮಾರ್ ಮಾಥೂರ್ ( 25) ಹಾಗೂ ರಾಜಸ್ಥಾನದ ದಾಮೋರ್ ಅಮಿತ್ ಗಣಪತಿ ಬಾಯ್ ( 23) ಮೃತಪಟ್ಟವರು. ಗಂಭೀರ ಗಾಯಗೊಂಡ ಓರ್ವ ಕಾರ್ಮಿಕನನ್ನು ಮಂಗಳೂರಿನ ಆಸ್ಫತ್ರೆಗೆ ದಾಖಲಿಸಲಾಗಿದೆ.
ಕೇರಳದ ಮಣ್ಣಾರ್ ಕಾಡ್ ನಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿ ರಾಷ್ಟ್ರೀಯ ಹೆದ್ದಾರಿಬದಿ ವಾಹನ ನಿಲ್ಲಿಸಿ ಕೆಲಸ ನಿರ್ವಹಿಸುತ್ತಿದ್ದಾಗ ಈ ದಾರುಣ ದುರ್ಘಟನೆ ನಡೆದಿದೆ.ಅತೀ ವೇಗದಿಂದ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಾರ್ಮಿಕರ ಮೇಲೆ ಹರಿದಿದೆ. ಅಪಘಾರದ್ಲಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ .
ರಾಷ್ಟ್ರೀಯ ಕಾಮಗಾರಿಯ ಗುತ್ತಿಗೆ ಪಡೆದ ಕಂಪೆನಿಯ ಕಾರ್ಮಿಕರು ರಾಷ್ಟೀಯ ಹೆದ್ದಾರಿಯಲ್ಲಿ ಕೆಲಸ ನಿರ್ಹಿಸುತ್ತಿದಾಗ ಈ ದುರ್ಘಟನೆ ನಡೆದಿದೆ. ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರರದಲ್ಲಿರಿಸಲಾಗಿದೆ .ಲಾರಿ ಚಾಲಕನನ್ನು ಮಂಜೇಶ್ವರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ .