ಕಾಸರಗೋಡು, ಜು. 10 (DaijiworldNews/TA): ಟ್ರೈಲರ್ ನಡಿಗೆ ಬೈಕ್ ಸಿಲುಕಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಗುರುವಾರ ಮುಂಜಾನೆ ಕಾಸರಗೋಡು ಪ್ರೆಸ್ ಕ್ಲಬ್ ಜಂಕ್ಷನ್ ಬಳಿ ನಡೆದಿದೆ.


ಅಗ್ನಿ ಶಾಮಕ ದಳದ ಸಿಬಂದಿ ಇಬ್ಬರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇರಿಯಣ್ಣಿಯ ರಂಜೀಶ್ (35) ಹಾಗೂ ಪ್ರಸಾದ್ ( 45) ಗಂಭೀರ ಗಾಯಗೊಂಡವರು. ಇವರು ಸಂಚರಿಸುತ್ತಿದ್ದ ಬೈಕ್ ಎದುರಿನಿಂದ ಬರುತ್ತಿದ್ದ ಟ್ರೈಲರ್ ನಡಿಗೆ ಸಿಲುಕಿ ಕೊಂಡಿದೆ. ಸುದ್ದಿ ತಿಳಿದು ಸ್ಥಳಕ್ಕೆ ತಲುಪಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಹರ ಸಾಹಸ ಪಟ್ಟು ಇಬ್ಬರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.