ಬೆಳ್ತಂಗಡಿ, ಜೂ. 25 (DaijiworldNews/AA): ಜಾಂಡೀಸ್ ಗೆ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದ ಯುವಕನೋರ್ವ, ಮತ್ತೆ ಜ್ವರ ಉಲ್ಬಣಗೊಂಡು ಸಾವನ್ನಪ್ಪಿದ ಘಟನೆ ಲ್ಯಾಲ ಗ್ರಾಮದ ವಿವೇಕಾನಂದ ನಗರದಲ್ಲಿ ಮಂಗಳವಾರ ನಡೆದಿದೆ.

ಲ್ಯಾಲ ಗ್ರಾಮದ ವಿವೇಕಾನಂದ ನಗರದ ಸೋಮಣ್ಣ ಕುಂಬಾರ ಅವರ ಪುತ್ರ ಸಂದೀಪ್ ಕುಲಾಲ್ (28) ಮೃತ ದುರ್ದೈವಿ.
ಕೆಲ ದಿನಗಳ ಹಿಂದೆ ಸಂದೀಪ್ ಅವರನ್ನು ಜಾಂಡೀಸ್ ಬಾಧಿಸಿದ್ದು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದರು. ಆದರೆ ಎರಡು ದಿನಗಳಿಂದ ಮತ್ತೆ ಜ್ವರ ಉಲ್ಬಣಗೊಂಡಿದ್ದು, ಜೂ. 24ರಂದು ಮೃತಪಟ್ಟಿದ್ದಾರೆ.
ವೃತ್ತಿಯಲ್ಲಿ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಕೆಲಸ ಮಾಡುತ್ತಿದ್ದ ಅವರು ಕಬಡ್ಡಿ ಆಟಗಾರರಾಗಿದ್ದರು. ಹಲವಾರು ಸಂಘ - ಸಂಸ್ಥೆಗಳಲ್ಲೂ ಗುರುತಿಸಿಕೊಂಡಿದ್ದರು.
ಮೃತರು ತಂದೆ, ತಾಯಿ, ಪತ್ನಿ, ಐದು ತಿಂಗಳ ಮಗು ಹಾಗೂ ಸಹೋದರನನ್ನು ಅಗಲಿದ್ದಾರೆ.