ಉಡುಪಿ, ಜೂ. 16 (DaijiworldNews/AA): ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರ ಅಧಿಕಾರ ಹಸ್ತಾಂತರ ಸಮಾರಂಭವು ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜೂನ್ 16ರಂದು ನಡೆಯಿತು. ಈ ವೇಳೆ ಅಧಿಕಾರ ಹಸ್ತಾಂತರಿಸಿದ ಕಿಶೋರ್ ಕುಮಾರ್ ಕುಂದಾಪುರ ಅವರು ತೀವ್ರ ಅಸಮಧಾನ ವ್ಯಕ್ತಪಡಿಸಿದರು.



ಕುತ್ಯಾರ್ ನವೀನ್ ಶೆಟ್ಟಿಯವರನ್ನು ಪಕ್ಷದ ಹೊಸ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಜೂನ್ 11 ರಂದು ಕಿಶೋರ್ ಕುಮಾರ್ ಕುಂದಾಪುರ ಅವರಿಗೆ ಪಕ್ಷದ ಅಧಿಕಾರಿಗಳು ನಿರ್ಗಮನ ಸೂಚನೆ ನೀಡಿದರು. ಇಂದು ಅಧಿಕಾರ ಹಸ್ತಾಂತರ ಸಮಾರಂಭ ನಿಗದಿಪಡಿಸಲಾಗಿತ್ತು.
ಅಧಿಕಾರ ಹಸ್ತಾಂತರಿಸಿ ಬಳಿಕ ಮಾತನಾಡಿದ ಕಿಶೋರ್ ಕುಮಾರ್ ಕುಂದಾಪುರ ಅವರು, "ಶಾಸಕ, ಸಂಸದರ ಚುನಾವಣೆಯಲ್ಲಿ ಸಮುದಾಯದ ಬಲ, ಹಣದ ಬಲ ಮತ್ತು ಮುಖಬೆಲೆಗೆ ಮನ್ನಣೆ ನೀಡಲಾಗುತ್ತದೆ. ಅದು ಅಗತ್ಯವಾಗಿತ್ತು. ಆದರೆ ಜಿಲ್ಲಾಧ್ಯಕ್ಷ ಸ್ಥಾನಕ್ಕೂ ಆ ಮಾನದಂಡಗಳನ್ನು ಪರಿಗಣಿಸಿದರೆ ನಾನು ಇದನ್ನು ಒಪ್ಪುವುದಿಲ್ಲ. ನನ್ನ ರಾಜಕೀಯ ಜೀವನ ಒಂದು ದುಃಖದ ಕಥೆ. ನಾನು ಕುಂದಾಪುರದಲ್ಲಿ ಪಕ್ಷಕ್ಕೆ ಒಂದು ಕಚೇರಿಯನ್ನು ನಿರ್ಮಿಸಿದೆ ಮತ್ತು ಪಕ್ಷಕ್ಕಾಗಿಯೇ ಸಾಲ ಮಾಡಿ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಿದೆ. ಕುಂದಾಪುರದಲ್ಲಿ ಪಕ್ಷಕ್ಕೆ ಯಾವುದೇ ಅಭ್ಯರ್ಥಿ ಇಲ್ಲದಿದ್ದಾಗ ನನ್ನನ್ನು ಶಾಸಕ ಚುನಾವಣೆಗೆ ಸ್ಪರ್ಧಿಸಲು ತಿಳಿಸಲಾಯಿತು. ಆದರೆ ನನಗೆ ಸಿಕ್ಕಿದ್ದು ಕೇವಲ ಸಾಲ ಮತ್ತು ಸೋಲು. ಪಕ್ಷದಿಂದ ನನ್ನನ್ನು ಜಿಲ್ಲಾಧ್ಯಕ್ಷನನ್ನಾಗಿ ಮಾಡಲಾಯಿತು. ಆದರೆ ನನ್ನ ಅವಧಿಯ ಎಂಟು ತಿಂಗಳೊಳಗೆ ನನ್ನನ್ನು ಸ್ಥಾನದಿಂದ ತೆಗೆದುಹಾಕಲಾಗುತ್ತದೆ ಎಂಬ ವದಂತಿಗಳು ಹಬ್ಬಿದವು. ನನಗೆ ಒಂದು ವರ್ಷ ನಾಲ್ಕು ತಿಂಗಳ ಅಧಿಕಾರಾವಧಿ ಇದ್ದರೂ, ಕೇವಲ ಎಂಟು ತಿಂಗಳು ಮಾತ್ರ ನಾನು ನಿಜವಾದ ಅಧ್ಯಕ್ಷನಾಗಿ ಕೆಲಸ ಮಾಡಲು ಸಾಧ್ಯವಾಯಿತು" ಎಂದು ತಿಳಿಸಿದರು.
"ಪಕ್ಷದ ನಿಧಿಗಾಗಿ ನಾನು ಎಂದಿಗೂ ಯಾರ ಮನೆ ಬಾಗಿಲಿಗೆ ಹೋಗಿ ಭಿಕ್ಷೆ ಬೇಡಲಿಲ್ಲ. ಬದಲಿಗೆ ನನ್ನ ಸ್ವಂತ ಹಣವನ್ನು ಪಕ್ಷಕ್ಕಾಗಿ ಖರ್ಚು ಮಾಡಿದ್ದೇನೆ. ಜಿಲ್ಲಾಧ್ಯಕ್ಷನಾಗಿ ನನ್ನನ್ನು ಮುಂದುವರಿಸಲು ನಾನು ಎಂದಿಗೂ ನನ್ನ ಪಕ್ಷದ ಅಧಿಕಾರಿಗಳೊಂದಿಗೆ ಭಿಕ್ಷೆ ಬೇಡಲಿಲ್ಲ. ಜೂನ್ 11 ರಂದು ಸಂಜೆ 7:30 ರ ಸುಮಾರಿಗೆ ನನಗೆ ರಾಜ್ಯ ಅಧಿಕಾರಿಯೊಬ್ಬರಿಂದ ಫೋನ್ ಕರೆ ಬಂತು. ನಾನು ನನ್ನ ಸ್ಥಾನದಿಂದ ತೆಗೆದುಹಾಕಲ್ಪಡುತ್ತೇನೆ ಎಂದು ತಿಳಿಸಲಾಯಿತು. ನಾನು ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದೆ ಮತ್ತು ಹೆಚ್ಚು ಪ್ರತಿಕ್ರಿಯಿಸಲಿಲ್ಲ. ಆದರೆ ನನಗೆ ವಿಷಯ ತಿಳಿಸುವ ಕೆಲ ನಿಮಿಷಗಳ ಮೊದಲೇ ಆದೇಶವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಯಿತು. ನನ್ನನ್ನು ನಡೆಸಿಕೊಂಡ ರೀತಿ ನನಗೆ ನಿಜವಾಗಿಯೂ ನೋವುಂಟು ಮಾಡಿದೆ" ಎಂದು ಹೇಳಿದರು.
"ಪಕ್ಷದ ಈ ನಿರ್ಧಾರ ನನಗೆ ತೀವ್ರ ನೋವುಂಟು ಮಾಡಿದೆ," ಎಂದ ಅವರು, ನೂತನ ಜಿಲ್ಲಾಧ್ಯಕ್ಷರಿಗೆ ಶುಭಾಶಯ ಕೋರಿದರು. "ನನ್ನ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ನಾನು ಈಗಾಗಲೇ ಮಾಡಿದ್ದಕ್ಕಿಂತ ಹೆಚ್ಚು ಹೇಗೆ ಸಾಬೀತುಪಡಿಸಬೇಕು ಎಂದು ನನಗೆ ತಿಳಿದಿಲ್ಲ. ನಾನು ಒಂದೂವರೆ ವರ್ಷದಲ್ಲಿ ಕೇವಲ ಎಂಟು ತಿಂಗಳು ಅಧ್ಯಕ್ಷನಾಗಿ ಸೇವೆ ಸಲ್ಲಿಸಿದೆ. ನಾನು ಸೇವೆಯನ್ನು ಹೆಮ್ಮೆಯಿಂದ ಮಾಡಿದೆ. ನಾನು ಎಲ್ಲರನ್ನೂ, ನನಗೆ ಸಹಕರಿಸದವರನ್ನೂ ಸಹ ಗೌರವಿಸಿದೆ" ಎಂದರು.
"ನನ್ನನ್ನು ಕರೆದವರೇ ನನ್ನನ್ನು ತೆಗೆದುಹಾಕಲು ಶಿಫಾರಸ್ಸು ಮಾಡಿದ್ದಾರೆ ಎಂದು ಜನರು ತಿಳಿಸಿದ್ದಾರೆ. ಇದು ನನಗೆ ತುಂಬಾ ಅವಮಾನಕರವಾಗಿದೆ. ನಾನು ಎಂದಾದರೂ ವೈಯಕ್ತಿಕ ಲಾಭಕ್ಕಾಗಿ ನನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದೇನೆಯೇ? ಇಲ್ಲ. ನನ್ನ ಅವಧಿಯಲ್ಲಿ ನಾನು ಬಹಳಷ್ಟು ಖರ್ಚು ಮಾಡಿದ್ದೇನೆ. ನನಗೆ ಬೆಂಬಲ ನೀಡಿದವರಿಗೆ ಸತ್ಯ ತಿಳಿದಿದೆ. ನಾನು ಎಂದಿಗೂ ಯಾರಿಂದಲೂ ಹಣ ಸಂಗ್ರಹಿಸಿಲ್ಲ" ಎಂದು ನುಡಿದರು.
"ಪಕ್ಷದ ಅನೇಕ ಕಾರ್ಯಕರ್ತರು ಕಣ್ಣೀರು ಸುರಿಸುತ್ತಾ ತಮಗೆ ಕರೆ ಮಾಡಿ ಈ ನಿರ್ಧಾರದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಯಾರೋ ನನಗೆ, 'ದೇವರು ನಿಮ್ಮನ್ನು ನೋಡಿಕೊಳ್ಳುತ್ತಾನೆ' ಎಂದು ಹೇಳಿದರು. ದೇವರು ಅವರಿಗೂ ಆಶೀರ್ವದಿಸಲಿ" ಎಂದು ತಿಳಿಸಿದರು.
"ನಾನು ಹಣ ಸಂಗ್ರಹಿಸಿದ್ದೇನೆ ಎಂಬ ಆರೋಪಗಳಿವೆ. ಆದರೆ ಸತ್ಯ ನನಗೆ ಬೇರೆಯವರಿಗಿಂತ ಹೆಚ್ಚು ತಿಳಿದಿದೆ. ರಾಜಕೀಯವು ನನಗೆ ಜಗತ್ತಿನ ಅಂತ್ಯವಲ್ಲ. ಅದನ್ನು ಮೀರಿ ನನಗೆ ದೊಡ್ಡ ಜೀವನವಿದೆ. ಈ ದುದ್ದೆಯನ್ನು ನೀಡಿದ ಬಿಜೆಪಿಗೆ ನಾನು ಕೃತಜ್ಞನಾಗಿದ್ದೇನೆ. ನಾನು ವೈಯಕ್ತಿಕ ಮಟ್ಟದಲ್ಲಿ ನಾನು ಗಮನಾರ್ಹವಾಗಿ ಬೆಳೆದಿದ್ದೇನೆ" ಎಂದು ಹೇಳಿದರು.
"ನಿರ್ಗಮಿತ ಅಧ್ಯಕ್ಷರಿಗೆ ಸನ್ಮಾನಿಸುವ ಸಂಪ್ರದಾಯವಿದೆ. ಆದರೆ ನನಗೆ ಅಂತಹ ಯಾವುದೇ ಗೌರವ ಬೇಡ. ಬೇರೆಯವರನ್ನು ಮೆಚ್ಚಿಸಲು ಸನ್ಮಾನವನ್ನು ಸ್ವೀಕರಿಸುವುದರಲ್ಲಿ ನನಗೆ ನಂಬಿಕೆ ಇಲ್ಲ. ನನಗೆ ಇನ್ನು ಮುಂದೆ ಯಾವುದೇ ಅಧಿಕಾರ ಇಲ್ಲ. ಅಧಿಕಾರವನ್ನು ನನ್ನಿಂದ ಕಸಿದುಕೊಳ್ಳಲಾಗಿದೆ. ಮತ್ತು ನಾನು ಅದನ್ನು ಔಪಚಾರಿಕವಾಗಿ ಹಸ್ತಾಂತರಿಸುವುದಿಲ್ಲ. ಪ್ರಧಾನ ಕಾರ್ಯದರ್ಶಿ ಅದನ್ನು ಮಾಡುತ್ತಾರೆ" ಎಂದರು.