ವಿಟ್ಲ, ಜೂ. 15 (DaijiworldNews/TA) : ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ತಾಳಿತ್ತನೂಜಿ ವಾರ್ಡಿನ ಸರವು ಸಂಪರ್ಕಿಸುವ ಕಾಲುದಾರಿ ಕಲ್ಲಮರೆಯಿ ಎಂಬಲ್ಲಿ ಕಾಲುದಾರಿ ಸಂಪೂರ್ಣವಾಗಿ ಜರಿದು ಕಾಲುದಾರಿ ಇಲ್ಲದಾಗಿ ಸಂಪರ್ಕ ಕಡಿದು ಹೋಗಿದೆ.

ಇಲ್ಲಿಗೆ ಪರ್ಯಾಯ ಕಾಲುದಾರಿಯಿಲ್ಲದೆ ಜನರು ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ . ಘಟನಾ ಸ್ಥಳಕ್ಕೆ ಕೊಳ್ನಾಡು ಗ್ರಾ.ಪಂಚಾಯತ್ ಉಪಾಧ್ಯಕ್ಷರಾದ ಕೆ.ಎ.ಅಸ್ಮ ಹಸೈನಾರ್,ಪಂಚಾಯತ್ ಅಭಿವೃದ್ದಿ ಅಧಿಕಾರಿ ಲಾವಣ್ಯ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಧರ್ಭದಲ್ಲಿ ಸ್ಥಳೀಯ ನಾಗರಿಕರು ಭಾಗಿಗಳಾಗಿದ್ದರು.