ವಿಟ್ಲ, ಜೂ. 12 (DaijiworldNews/TA): ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವು ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಶ್ರೀಕೃಷ್ಣ ಗುರೂಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜರುಗಿತು.




ಈ ವೇಳೆ ಆಶೀರ್ವಚನ ನೀಡಿದ ಗುರೂಜಿರವರು ಕ್ಷೇತ್ರದಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಕಾರ, ಕಲೆಗೆ ಪ್ರೋತ್ಸಾಹ, ಸಮಾಜದಲ್ಲಿ ಹಿಂದುಳಿದವರ ಏಳಿಗೆಗಾಗಿ ನಿರಂತರವಾಗಿ ಪ್ರಯತ್ನ ನಡೆಸಲಾಗುತ್ತಿದೆ. ಇಂದಿನ ಮಕ್ಕಳ ಮುಂದಿನ ಪ್ರಜೆಗಳು ಎನ್ನುವ ನಿಟ್ಟಿನಲ್ಲಿ ಮಕ್ಕಳಿಗೆ ಎಳವೆಯಲ್ಲಿಯೇ ಸಂಸ್ಕಾರವನ್ನು ಕಲಿಸುವ ಕೆಲಸವು ಕ್ಷೇತ್ರದಿಂದ ಆಗುತ್ತಿದೆ. ಕ್ಷೇತ್ರದ ಭಕ್ತಾಧಿಗಳ ಸಹಕಾರದೊಂದಿಗೆ ನಿರಂತರವಾಗಿ ಸಮಾಜಮುಖಿ ಕೆಲಸ ಕ್ಷೇತ್ರದಿಂದ ಆಗುತ್ತಿದೆ. ಈ ಬಾರಿ ಪುಸ್ತಕ ವಿತರಣೆಗೆ ಸುದರ್ಶನ್ ತಾರಿದಳರವರು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಕ್ಷೇತ್ರದ ಮೋಕ್ತಸರರಾದ ಎಂ.ಕೆ. ಕುಕ್ಕಾಜೆ, ಪ್ರಮುಖರಾದ ಜಗನ್ನಾಥ ರೈ ಕೆಳಗಿನಮನೆ, ತಾರಾನಾಥ ಕುಲಾಲ್ ಮೆಲ್ಕಾರ್, ವಿಶ್ವನಾಥ ಪೂಜಾರಿ ಕಲ್ಲಡ್ಕ, ಮಹಿಳಾ ಸಂಘದ ಅಧ್ಯಕ್ಷೆ ಅನುರಾಧ ಪಳನೀರು ಮುಂತಾದವರು ಉಪಸ್ಥಿತರಿದ್ದರು. ಕೀರ್ತನಾ ಪಳನೀರು ಸ್ವಾಗತಿಸಿ, ವಿನಯ ಕುಕ್ಕಾಜೆ ವಂದಿಸಿದರು.