ಮಂಗಳೂರು, ಜೂ. 07 (DaijiworldNews/TA): ನಗರದ ಯೆಯ್ಯಾಡಿಯಲ್ಲಿ ಶುಕ್ರವಾರ ಮದ್ಯಾಹ್ನದ ವೇಳೆಯಲ್ಲಿ ಯುವಕನಿಗೆ ಚೂರಿ ಇರಿದ ಪ್ರಕರಣ ನಡೆದಿದೆ. ಕೌಶಿಕ್ ಎಂಬಾತ ಚೂರಿ ಇರಿತಕ್ಕೆ ಒಳಗಾದವ ಎಂದು ಹೇಳಲಾಗಿದೆ. ಯುವಕನ ಸ್ಥಿತಿ ಚಿಂತಾಜನಕವಾಗಿದೆ.

ಬ್ರಿಜೇಶ್ ಶೆಟ್ಟಿ, ಗಣೇಶ್ ಬಿಜೈ ಚೂರಿ ಇರಿದ ಆರೋಪಿಗಳು ಎಂದು ತಿಳಿದು ಬಂದಿದೆ. ಒಂದು ತಿಂಗಳ ಹಿಂದೆ ಕ್ಷುಲ್ಲಕ ವಿಚಾರಕ್ಕೆ ಇವರುಗಳ ಮಧ್ಯೆ ಗಲಾಟೆ ನಡೆದಿದೆ ಎಂದು ಹೇಳಲಾಗಿದೆ.
ಬ್ರಿಜೇಶ್ ಶೆಟ್ಟಿ ಕೌಶಿಕ್ ಎಂಬಾತನಿಗೆ ಹೊಡೆದಿದ್ದ ಇದೇ ವೇಳೆ ಬ್ರಿಜೇಶ್ ಗೆ ಕೌಶಿಕ್ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಗಲಾಟೆಯ ದ್ವೇಷದ ಹಿನ್ನೆಲೆ ನಿನ್ನೆ ಮತ್ತೆ ಕೌಶಿಕ್ ಮೇಲೆ ಹಲ್ಲೆ ಮಾಡಲಾಗಿದೆ. ಹೊಟ್ಟೆಯ ಭಾಗಕ್ಕೆ ಚೂರಿ ಇರಿತ ಹಿನ್ನೆಲೆ ಕೌಶಿಕ್ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.