ಉಡುಪಿ, ಜೂ.02 (DaijiworldNews/TA): ಭಾರತದ ನೆರೆ ರಾಷ್ಟ್ರ ಪಾಕ್ ಮೇಲೆ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾಗಿಯಾದ ಸೈನಿಕನಿಗೆ ಉಡುಪಿಯಲ್ಲಿ ಸನ್ಮಾನ ಮಾಡಲಾಯಿತು.

ಬ್ರಹ್ಮಾವರ ತಾಲೂಕಿನ ಮಟಪಾಡಿ ಗ್ರಾಮದ ಚರಣ್ ಪೂಜಾರಿ ಪೆಹಲ್ಗಾಮ್ ಹತ್ಯಾಕಾಂಡದ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಆಪರೇಷನ್ ಕಾರ್ಯಾಚರಣೆ ಮುಗಿಸಿ ರಜೆಯಲ್ಲಿ ಊರಿಗೆ ಬಂದ ಚರಣ್ ರನ್ನು ಗ್ರಾಮಸ್ಥರು ಮನೆಗೆ ತೆರಳಿ ಅಭಿನಂದಿಸಿದ್ದಾರೆ.
ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಈ ಸಂದರ್ಭದಲ್ಲಿ ಸನ್ಮಾನಿಸಿ ಮಾತನಾಡಿದರು. ದೇಶದ ಸೈನಿಕರ ಸಾಧನೆಯನ್ನು ಪ್ರಶಂಸಿಸಿದರು. ಕರಾವಳಿ ಭಾಗದ ದೇಶಭಕ್ತ ಯವಕರಿಗೆ ಚರಣ್ ಪೂಜಾರಿ ಪ್ರೇರಣೆ ಎಂದರು.