ಮಂಗಳೂರು, ಏ.21 (DaijiworldNews/AA): ಕೆಂಜಾರ್ ಸಮೀಪ ಸಂಭವಿಸಿದ ಭೀಕರ ಅಪಘಾತದಲ್ಲಿ ಪೆರ್ಮುದೆಯ 27 ವರ್ಷದ ಜೋಶ್ವಾ ಪಿಂಟೋ ಸಾವನ್ನಪ್ಪಿದ್ದಾರೆ.



ವರದಿಗಳ ಪ್ರಕಾರ, ಜೋಶ್ವಾ ಅವರು ಈಸ್ಟರ್ ವಸ್ತುಗಳನ್ನು ಖರೀದಿಸಿ ಮಂಗಳೂರಿನಿಂದ ಸ್ನೇಹಿತರೊಂದಿಗೆ ಹಿಂತಿರುಗುತ್ತಿದ್ದಾಗ ರಸ್ತೆಯಲ್ಲಿದ್ದ ಗುಂಡಿಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ನಿಯಂತ್ರಣ ತಪ್ಪಿ ವಾಹನವು ತಿರುವಿನಲ್ಲಿ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ.
ಐಸಿವೈಎಂ ಬಜ್ಪೆ ಘಟಕದ ಸಕ್ರಿಯ ಸದಸ್ಯರಾಗಿದ್ದ ಜೋಶ್ವಾ ಅವರು ತಮ್ಮ ನಿಸ್ವಾರ್ಥ ಸೇವೆಯಿಂದ ಗುರುತಿಸಿಕೊಂಡಿದ್ದರು. ಅವರ ನಾಯಕತ್ವ ಗುಣಗಳು ಮತ್ತು ಎಲ್ಲರೊಂದಿಗಿನ ಉತ್ತಮ ಬಾಂಧವ್ಯಕ್ಕಾಗಿ ಅವರು ಧರ್ಮಗುರುಗಳಿಂದ ಗೌರವಿಸಲ್ಪಟ್ಟಿದ್ದರು.
ಜೋಶ್ವಾ ಪಿಂಟೋ ಅವರ ಅಗಲಿಕೆಯಿಂದ ಸಮುದಾಯವು ದುಃಖಿಸುತ್ತಿದ್ದು, ಅವರ ಕುಟುಂಬ ಹಾಗೂ ಸ್ನೇಹಿತರಿಗೆ ಸಂತಾಪ ಸೂಚಿಸುತ್ತಿದೆ. ಅವರ ನೆನಪು ಇತರರಿಗೆ ಒಳ್ಳೆಯ ಕೆಲಸ ಮುಂದುವರಿಸಲು ಸ್ಫೂರ್ತಿ ನೀಡಲಿ.
ಅಂತ್ಯಕ್ರಿಯೆಯ ವಿಧಿವಿಧಾನಗಳು ಮಂಗಳವಾರ (ನಾಳೆ) ಸಂಜೆ 4 ಗಂಟೆಗೆ ಬಜ್ಪೆಯ ಸಂತ ಜೋಸೆಫರ ಚರ್ಚ್ನಲ್ಲಿ ನಡೆಯಲಿದೆ.