ಕಾಸರಗೋಡು, ಏ.20 (DaijiworldNews/AA): ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬವಾದ ಈಸ್ಟರನ್ನು ಕಾಸರಗೋಡಿನಲ್ಲೂ ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸಲಾಯಿತು.





ಶನಿವಾರ ರಾತ್ರಿ ಹಾಗೂ ರವಿವಾರ ಬೆಳಿಗ್ಗೆ ಚರ್ಚ್ ಗಳಲ್ಲಿ ಈಸ್ಟರ್ ಹಬ್ಬದ ಬಲಿಪೂಜೆಗಳು ನಡೆದವು.
ಕಯ್ಯಾರ್ ಕ್ರಿಸ್ತರಾಜ ದೇವಾಲಯದಲ್ಲಿ ನಡೆದ ಬಲಿಪೂಜೆಗೆ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಫಾ. ರೋಯ್ ಸ್ಟನ್ ಮಾಡ್ತಾ ನೆರವೇರಿಸಿದರು. ಕಯ್ಯಾರ್ ಕ್ರಿಸ್ತರಾಜ ಚರ್ಚ್ ನ ಧರ್ಮಗುರು ಫಾ. ವಿಶಾಲ್ ಮೋನಿಸ್ ಉಪಸ್ಥಿತರಿದ್ದರು. ಹೊಸ ಅಗ್ನಿಯ ಆಶೀರ್ವಚನದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು.
ಬೈಬಲ್ ನ ಹಳೆ ಹಾಗೂ ಹೊಸ ಒಡಂಬಡಿಕೆಯ ಆಯ್ದ ಭಾಗಗಳ ವಾಚನ ಹಾಗೂ ಧರ್ಮಗುರುಗಳು ಪ್ರವಚನ, ಸಂದೇಶ ನೀಡಿದರು. ಪವಿತ್ರ ಜಾಲದ ಆಶೀರ್ವಚನ ಹಾಗೂ ಕ್ರೈಸ್ತ ವಿಶ್ವಾಸದ ಮರು ಧ್ರಡೀಕರಣ ಹಾಗೂ ಕ್ರೈಸ್ತ ಸಂತರನ್ನು ಸ್ಮರಿಸಲಾಯಿತು.