ನವದೆಹಲಿ,,ಮಾ. 06 (DaijiworldNews/AK):ಅಮೆರಿಕ ದಾಳಿಯಿಂದ ಹಿಂದೂ ಮಹಾಸಾಗರದಲ್ಲಿ ಮುಳುಗಿದ ಇರಾನಿನ ಯುದ್ಧನೌಕೆಗೆ ಸಹಾಯಕ್ಕೆ ಭಾರತೀಯ ನೌಕಾಪಡೆ ಧಾವಿಸಿದೆ.

ಅಮೆರಿಕದ ಜಲಾಂತರ್ಗಾಮಿ ನೌಕೆಯ ಟಾರ್ಪಿಡೊ ದಾಳಿಗೆ ಹಿಂದೂ ಮಹಾಸಾಗರದಲ್ಲಿ ಇರಾನಿನ ಯುದ್ಧನೌಕೆ ಐರಿಸ್ ದೇನಾದಿಂದ ಬಂದ ಸಂಕಷ್ಟದ ಸಂಕೇತವನ್ನು ಅನುಸರಿಸಿ ಭಾರತೀಯ ನೌಕಾಪಡೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ಮಾರ್ಚ್ 4 ರ ಮುಂಜಾನೆ ಕೊಲಂಬೊದಲ್ಲಿರುವ ಸಾಗರ ರಕ್ಷಣಾ ಸಮನ್ವಯ ಕೇಂದ್ರ ಕ್ಕೆ IRIS ದೇನಾದಿಂದ ಸಂಕಷ್ಟದ ಕರೆ ಬಂದಿತು ಎಂದು ನೌಕಾಪಡೆ ತಿಳಿಸಿದೆ. ಈ ಯುದ್ಧನೌಕೆಯು ಗ್ಯಾಲೆಯಿಂದ ಪಶ್ಚಿಮಕ್ಕೆ 20 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ, ಶ್ರೀಲಂಕಾದ ಜವಾಬ್ದಾರಿಯಡಿಯಲ್ಲಿರುವ ಶೋಧ ಮತ್ತು ರಕ್ಷಣಾ ಪ್ರದೇಶದೊಳಗೆ ನೆಲೆಗೊಂಡಿತ್ತು.
ಮಾಹಿತಿ ಪಡೆದ ಕೂಡಲೇ ಭಾರತೀಯ ನೌಕಾಪಡೆಯು ವಿಳಂಬವಿಲ್ಲದೆ ತನ್ನ ಪ್ರಯತ್ನಗಳನ್ನು ಪ್ರಾರಂಭಿಸಿತು. ಭಾರತೀಯ ನೌಕಾಪಡೆ ಮತ್ತು ಶ್ರೀಲಂಕಾ ಅಧಿಕಾರಿಗಳ ನಡುವಿನ ಸಮನ್ವಯ ಮುಂದುವರೆದಿದೆ. ಮಾರ್ಚ್ 4 ರಂದು ಶ್ರೀಲಂಕಾದ ದಕ್ಷಿಣ ಕರಾವಳಿಯ ಗ್ಯಾಲೆಯಿಂದ ಸುಮಾರು 40 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆಯೊಂದು ಐರಿಸ್ ದೇನಾ ಮೇಲೆ ದಾಳಿ ಮಾಡಿ ಮುಳುಗಿಸಿತ್ತು.